Select Your Language

Notifications

webdunia
webdunia
webdunia
Monday, 14 April 2025
webdunia

ವಿಜಯ್ ಸೇತುಪತಿ ಮೇಲೆ ಹಲ್ಲೆ ಮಾಡಿದಾತನಿಗೆ ನಗದು ಬಹುಮಾನ!

ವಿಜಯ್ ಸೇತುಪತಿ
ಚೆನ್ನೈ , ಸೋಮವಾರ, 8 ನವೆಂಬರ್ 2021 (17:19 IST)
ಚೆನ್ನೈ: ತಮಿಳು ನಟ ವಿಜಯ್ ಸೇತುಪತಿ ಮೇಲೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪಾನಮತ್ತನಾಗಿದ್ದ ವ್ಯಕ್ತಿ ಹಲ್ಲೆಗೆ ಮುಂದಾಗಿದ್ದು ಭಾರೀ ಸುದ್ದಿಯಾಗಿತ್ತು.

ಈತ ಪಾನಮತ್ತನಾಗಿದ್ದ ಸಂದರ್ಭದಲ್ಲಿ ಈ ರೀತಿ ನಡೆದುಕೊಂಡ ಕಾರಣ ಪೊಲೀಸರ ಮಧ್ಯಸ್ಥಿಕೆಯಲ್ಲಿ ರಾಜೀ ಸಂಧಾನ ಮಾಡಿ ಪ್ರಕರಣ ಇತ್ಯರ್ಥಗೊಳಿಸಲಾಗಿತ್ತು. ವಿಜಯ್ ಸೇತುಪತಿ ಸ್ವಾತಂತ್ರ್ಯ ಹೋರಾಟಗಾರ ಮುತ್ತು ರಾಮಲಿಂಗಸ್ವಾಮಿಗೆ ಅವಮಾನ ಮಾಡಿದ್ದರು. ಅದಕ್ಕಾಗಿ ಹಲ್ಲೆ ನಡೆಸಲು ಮುಂದಾದೆ ಎಂದು ಆರೋಪಿ ಹೇಳಿದ್ದ.

ಆದರೆ ಇದೀಗ ರಾಜಕಾರಣಿ ಅರ್ಜುನ್ ಸಂಪತ್ ಎಂಬವರು ಮುತ್ತು ರಾಮಲಿಂಗ ಸ್ವಾಮಿಗೆ ಹಲ್ಲೆ ಮಾಡಿದವರಿಗೆ ಪ್ರತಿ ಒದೆತಕ್ಕೆ 1 ಸಾವಿರ ರೂ. ಬಹುಮಾನ ಘೋಷಿಸಿ ವಿವಾದಕ್ಕೀಡಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಾಲಿ ಧನಂಜಯ್ ತೆಕ್ಕೆಯಲ್ಲಿದೆ ಸಿನಿಮಾಗಳ ಗೊಂಚಲು