Select Your Language

Notifications

webdunia
webdunia
webdunia
webdunia

ಜಗನ್​ ವಿರುದ್ಧ ಪವನ್ ಕಲ್ಯಾಣ್ ವಾಗ್ದಾಳಿ

ಜಗನ್​ ವಿರುದ್ಧ ಪವನ್ ಕಲ್ಯಾಣ್ ವಾಗ್ದಾಳಿ
ವಿಶಾಖಪಟ್ಟಣ , ಭಾನುವಾರ, 16 ಅಕ್ಟೋಬರ್ 2022 (20:24 IST)
ನಿನ್ನೆ ವಿಶಾಖಪಟ್ಟಣದಲ್ಲಿ ಪವನ್ ಕಾರ್ಯಕ್ರಮಕ್ಕೆ YSRP ಭಾರೀ ವಿರೋಧ ಮಾಡಿದ್ದರು. YSRP ಕಾರ್ಯಕರ್ತರು ಗೋ ಬ್ಯಾಕ್ ಪವನ್ ಕಲ್ಯಾಣ್ ಎಂದು ಘೋಷಣೆ ಕೂಗಿದ್ದರು. ಈಗಾಗಿ ಪವನ್​ ಕಲ್ಯಾಣ್​ ಕಾರ್ಯಕ್ರಮ ರದ್ದು ಮಾಡಿದ್ದರು. ಇಂದು ವಿಶಾಖಪಟ್ಟಣಂನಲ್ಲಿ ಪವನ್ ಕಲ್ಯಾಣ್ ಸುದ್ದಿಗೋಷ್ಠಿ ನಡೆಸಿ ಸಿಎಂ ಜಗನ್ ಮೋಹನ್ ರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ, ನಿನ್ನೆಯ ಘಟನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದದ್ದಾರೆ. ಜಗನ್ ಸರ್ಕಾರ ಸರ್ವಾಧಿಕಾರ ಧೋರಣೆ ಅನುಸರಿಸುತ್ತಿದೆ. ನಿಮ್ಮಂಥ ಕ್ರಿಮಿನಲ್​ಗಳನ್ನು ಹೇಗೆ ಎದುರಿಸಬೇಕೋ ನನಗೆ ಗೊತ್ತು. ಉತ್ತರಾಂಧ್ರದಲ್ಲಿ ಶಾಂತಿ ಇರಬಾರದೆಂಬುದೇ ಅವರ ಉದ್ದೇಶ. ಬಂಧಿತ ಜನಸೇನಾ ಕಾರ್ಯಕರ್ತರ ಬಿಡುಗಡೆವರೆಗೆ` ಜನವಾಣಿ' ರ್ಯಾಲಿ ನಡೆಸಲ್ಲ. ಒಬ್ಬೊಬ್ಬ ರಾಜ ಬಂದಾಗ ಒಂದೊಂದು ರಾಜಧಾನಿ ಅಂದ್ರೆ ಹೇಗೆ..? ಈ ಸರ್ಕಾರದಲ್ಲಿ ವಿಕೇಂದ್ರಿಕರಣ ಇಲ್ಲ, ಮಂತ್ರಿಗಳು ನಾಮಕಾವಸ್ಥೆಗೆ ಇದ್ದಾರೆ .YSRP 3 ರಾಜಧಾನಿಗಳ ಕಾರ್ಯಕ್ರಮಕ್ಕೂ ಮುನ್ನ ನಮ್ಮ ಕಾರ್ಯಕ್ರಮ ನಿಗದಿ ಮಾಡಿದ್ದೆವು. 3 ತಿಂಗಳ ಹಿಂದೆಯೇ ಜನವಾಣಿ ರ್ಯಾಲಿ ಬಗ್ಗೆ ಘೋಷಣೆ ಮಾಡಿದ್ದೆವು ಎಂದು ವಾಗ್ದಾಳಿ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಯನತಾರಾ-ವಿಘ್ನೇಶ್ 6 ವರ್ಷಗಳ ಹಿಂದೆಯೇ ಆಗಿತ್ತು!