Publish Date: Sun, 16 Oct 2022 (20:24 IST)
Updated Date: Sun, 16 Oct 2022 (20:27 IST)
ನಿನ್ನೆ ವಿಶಾಖಪಟ್ಟಣದಲ್ಲಿ ಪವನ್ ಕಾರ್ಯಕ್ರಮಕ್ಕೆ YSRP ಭಾರೀ ವಿರೋಧ ಮಾಡಿದ್ದರು. YSRP ಕಾರ್ಯಕರ್ತರು ಗೋ ಬ್ಯಾಕ್ ಪವನ್ ಕಲ್ಯಾಣ್ ಎಂದು ಘೋಷಣೆ ಕೂಗಿದ್ದರು. ಈಗಾಗಿ ಪವನ್ ಕಲ್ಯಾಣ್ ಕಾರ್ಯಕ್ರಮ ರದ್ದು ಮಾಡಿದ್ದರು. ಇಂದು ವಿಶಾಖಪಟ್ಟಣಂನಲ್ಲಿ ಪವನ್ ಕಲ್ಯಾಣ್ ಸುದ್ದಿಗೋಷ್ಠಿ ನಡೆಸಿ ಸಿಎಂ ಜಗನ್ ಮೋಹನ್ ರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ, ನಿನ್ನೆಯ ಘಟನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದದ್ದಾರೆ. ಜಗನ್ ಸರ್ಕಾರ ಸರ್ವಾಧಿಕಾರ ಧೋರಣೆ ಅನುಸರಿಸುತ್ತಿದೆ. ನಿಮ್ಮಂಥ ಕ್ರಿಮಿನಲ್ಗಳನ್ನು ಹೇಗೆ ಎದುರಿಸಬೇಕೋ ನನಗೆ ಗೊತ್ತು. ಉತ್ತರಾಂಧ್ರದಲ್ಲಿ ಶಾಂತಿ ಇರಬಾರದೆಂಬುದೇ ಅವರ ಉದ್ದೇಶ. ಬಂಧಿತ ಜನಸೇನಾ ಕಾರ್ಯಕರ್ತರ ಬಿಡುಗಡೆವರೆಗೆ` ಜನವಾಣಿ' ರ್ಯಾಲಿ ನಡೆಸಲ್ಲ. ಒಬ್ಬೊಬ್ಬ ರಾಜ ಬಂದಾಗ ಒಂದೊಂದು ರಾಜಧಾನಿ ಅಂದ್ರೆ ಹೇಗೆ..? ಈ ಸರ್ಕಾರದಲ್ಲಿ ವಿಕೇಂದ್ರಿಕರಣ ಇಲ್ಲ, ಮಂತ್ರಿಗಳು ನಾಮಕಾವಸ್ಥೆಗೆ ಇದ್ದಾರೆ .YSRP 3 ರಾಜಧಾನಿಗಳ ಕಾರ್ಯಕ್ರಮಕ್ಕೂ ಮುನ್ನ ನಮ್ಮ ಕಾರ್ಯಕ್ರಮ ನಿಗದಿ ಮಾಡಿದ್ದೆವು. 3 ತಿಂಗಳ ಹಿಂದೆಯೇ ಜನವಾಣಿ ರ್ಯಾಲಿ ಬಗ್ಗೆ ಘೋಷಣೆ ಮಾಡಿದ್ದೆವು ಎಂದು ವಾಗ್ದಾಳಿ ನಡೆಸಿದ್ದಾರೆ.