Select Your Language

Notifications

webdunia
webdunia
webdunia
webdunia

ವಿಜಯಲಕ್ಷ್ಮಿಯಿಂದ ದರ್ಶನ್ ಎಷ್ಟೆಲ್ಲಾ ಅನುಭವಿಸಿದ್ದಾರೆ ನೆನೆಸಿಕೊಳ್ಳಿ ಎಂದು ಟಾಂಗ್ ಕೊಟ್ಟಿದ್ದ ಪವಿತ್ರಾ ಗೌಡ

Pavithra Gowda

Krishnaveni K

ಬೆಂಗಳೂರು , ಮಂಗಳವಾರ, 18 ಜೂನ್ 2024 (10:46 IST)
ಬೆಂಗಳೂರು: 10 ವರ್ಷದ ಹಿಂದೆ ದರ್ಶನ್ ವೈಯಕ್ತಿಕ ಜೀವನ ಯಾವ ಪರಿಸ್ಥಿತಿಯಲ್ಲಿತ್ತು, ಆಗ ಜೊತೆಯಾಗಿದ್ದು ಯಾರು ಎಂದು ಹಿಂದೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಪವಿತ್ರಾಗೌಡ ಟಾಂಗ್ ಕೊಟ್ಟಿದ್ದರು. ಇಂದು ಅದೇ ಪವಿತ್ರಾರಿಂದ ದರ್ಶನ್ ಜೈಲು ಸೇರುವಂತಾಗಿದೆ.

ಈ ಹಿಂದೆ ಪವಿತ್ರಾಗೌಡ ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ಜೊತೆಗಿರುವ ಫೋಟೋ ಹಾಕಿ ನಮ್ಮ ಸಂಬಂಧಕ್ಕೆ 10 ವರ್ಷ ಎಂದಿದ್ದಕ್ಕೆ ಪತ್ನಿ ವಿಜಯಲಕ್ಷ್ಮಿ ಸಿಟ್ಟಾಗಿದ್ದರು. ಪವಿತ್ರಾ ಗೌಡ ಮಗಳು ದರ್ಶನ್ ಮಗಳು ಎಂದಿದ್ದಕ್ಕೆ ವಿಜಯಲಕ್ಷ್ಮಿ ಆಕೆಯ ನಿಜವಾದ ತಂದೆ ಯಾರು ಎಂದು ಹಳೆಯ ಫೋಟೋಗಳನ್ನು ಪ್ರಕಟಿಸಿದ್ದರು.

ಇದರಿಂದ ಸಿಟ್ಟಿಗೆದ್ದ ಪವಿತ್ರಾ ಗೌಡ ಸೋಷಿಯಲ್ ಮೀಡಿಯಾದಲ್ಲಿ ವಿಜಯಲಕ್ಷ್ಮಿ ವಿರುದ್ಧ ಹರಿಹಾಯ್ದಿದ್ದರು. ವಿಜಯಲಕ್ಷ್ಮಿಗೆ ನನ್ನ ವೈಯಕ್ತಿಕ ಜೀವನದ ಬಗ್ಗೆ, ಹಳೆಯ ಫೋಟೋಗಳನ್ನು ಪ್ರಕಟಿಸುವುದಕ್ಕೆ ಹಕ್ಕು ಇಲ್ಲ. ನನ್ನ ಮಗಳು ದರ್ಶನ್ ಮಗಳು ಎಂದು ನಾನು ಎಲ್ಲೂ ಹೇಳಿಕೊಂಡಿಲ್ಲ ಎಂದಿದ್ದರು.

ಅಲ್ಲದೆ, ‘ಕೆಲವು ಸಮಯದ ಮೊದಲು ನಾನು ದರ್ಶನ್ ಜೀವನದಲ್ಲಿ ಬರುವುದಕ್ಕೂ ಮುನ್ನ ಇಬ್ಬರ ನಡುವೆ ಏನೆಲ್ಲಾ ಸಮಸ್ಯೆಗಳಿತ್ತು. ದರ್ಶನ್ ಎಷ್ಟೆಲ್ಲಾ ಅನುಭವಿಸಿದ್ದರು ಎಂದು ನಿಮಗೆಲ್ಲರಿಗೂ ಗೊತ್ತಿರುತ್ತದೆ. ಗೊತ್ತಿಲ್ಲದೇ ಇದ್ದರೆ ಅದನ್ನು ನೆನೆಸಿಕೊಳ್ಳಿ’ ಎಂದಿದ್ದರು. ಆ ಮೂಲಕ ಇದಕ್ಕೆ ಮೊದಲು ದರ್ಶನ್ ಪತ್ನಿ ವಿಜಯಲಕ್ಷ್ಮಿ ಮೇಲೆ ಹಲ್ಲೆ ನಡೆಸಿದಾಗ ದೂರು ದಾಖಲಿಸಿ ದರ್ಶನ್ ಜೈಲಿಗೆ ಹೋಗುವಂತಾದ ಘಟನೆ ಬಗ್ಗೆ ಹೇಳಿಕೊಂಡಿದ್ದರು.

ಆದರೆ ಈಗ ಅದೇ ಪವಿತ್ರಾ ಗೌಡರಿಂದಾಗಿ ದರ್ಶನ್ ಹತ್ಯೆ ಕೇಸ್ ನಲ್ಲಿ ಸಿಲುಕಿಕೊಂಡು ಜೈಲು ಸೇರುವಂತಾಗಿದೆ. ಆಗ ಕೌಟುಂಬಿಕ ಕಲಹವಾಗಿದ್ದರಿಂದ ರಾಜಿಯಲ್ಲಿ ಇತ್ಯರ್ಥವಾಗಿತ್ತು. ಆದರೆ ಈಗ ಹತ್ಯೆ ಪ್ರಕರಣವಾಗಿದ್ದು ದರ್ಶನ್ ಗೆ ಅಷ್ಟು ಬೇಗ ಬಿಡುಗಡೆ ಭಾಗ್ಯ ದೊರೆಯುವುದು ಅನುಮಾನವಾಗಿದೆ. ಅವರ ಜೊತೆ ಸಹಕರಿಸಿದ ಪವಿತ್ರಾ ಗೌಡ ಕೂಡಾ ಜೈಲು ಕಂಬಿ ಎಣಿಸಬೇಕಾಗಿ ಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪವಿತ್ರಾ ಗೌಡಗಾಗಿ ಜೈಲು ಸೇರಿದ ದರ್ಶನ್, ಇತ್ತ ಪತಿಯ ಬಿಡುಗಡೆಗಾಗಿ ವಿಜಯಲಕ್ಷ್ಮಿ ಶತಪ್ರಯತ್ನ