Webdunia - Bharat's app for daily news and videos

Install App

ಜೈಲಿನಲ್ಲಿರುವ ಪವಿತ್ರಾ ಗೌಡಗೆ ಇಷ್ಟೆಲ್ಲಾ ಕಾಯಿಲೆಯಂತೆ

Krishnaveni K
ಬುಧವಾರ, 17 ಜುಲೈ 2024 (13:15 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಎ1 ಆರೋಪಿ ಪವಿತ್ರಾ ಗೌಡಗೆ ಈಗ ಸಾಕಷ್ಟು ಆರೋಗ್ಯ ಸಮಸ್ಯೆಗಳು ಕಾಡುತ್ತಿವೆಯಂತೆ. ಅವರಿಗೆ ಯಾವೆಲ್ಲಾ ಅನಾರೋಗ್ಯ ಕಾಡುತ್ತಿದೆ ನೋಡಿ.

ಸದಾ ಐಷಾರಾಮಿ ಜೀವನ ನಡೆಸುತ್ತಿದ್ದ ಪವಿತ್ರಾಗೆ ಈಗ ಜೈಲಿನ ವಾತಾವರಣ ಒಗ್ಗುತ್ತಿಲ್ಲ. ಮೆತ್ತನೆಯ ಮಂಚದ ಮೇಲೆ ಮಲಗುತ್ತಿದ್ದ ಪವಿತ್ರಾಗೆ ನೆಲದ ಮೇಲೆ ಮಲಗುವುದು ಕಷ್ಟವಾಗುತ್ತಿದೆ. ಚಿಕನ್, ಮಟನ್ ಎಂದು ರುಚಿ ರುಚಿಯಾದ ಆಹಾರ ಸೇವನೆ ಮಾಡುತ್ತಿದ್ದ ಪವಿತ್ರಾಗೆ ಜೈಲಿನ ಸಪ್ಪೆ ಊಟ ಮಾಡಲಾಗುತ್ತಿಲ್ಲ.

ಹೀಗಾಗಿ ಅಜೀರ್ಣ ಸಮಸ್ಯೆ ಕಾಡುತ್ತಿದೆಯಂತೆ. ಸರಿಯಾಗಿ ಊಟ ಸೇರದೇ ಗ್ಯಾಸ್ಟ್ರಿಕ್ ಸಮಸ್ಯೆ ಕಾಡುತ್ತಿದೆಯಂತೆ. ಇದಕ್ಕಾಗಿ ಮನೆಯವರು ಭೇಟಿಯಾದಾಗಲೆಲ್ಲಾ ಹಣ್ಣು-ಹಂಪಲುಗಳನ್ನು ತಂದು ಕೊಡುತ್ತಿದ್ದಾರೆ. ಇನ್ನು ಎಸಿ ರೂಂನಲ್ಲಿ ಮಲಗುತ್ತಿದ್ದವರಿಗೆ ಈಗ ಸೊಳ್ಳೆ ಕಡಿಸಿಕೊಂಡು ರಾತ್ರಿಯೆಲ್ಲಾ ನಿದ್ರೆಯಿಲ್ಲದೇ ಲೋ ಬಿಪಿ ಕಾಡುತ್ತಿದೆಯಂತೆ.

ಅವರ ಅನಾರೋಗ್ಯಕ್ಕೆ ಸದ್ಯಕ್ಕೆ ಜೈಲಿನಲ್ಲಿರುವ ವೈದ್ಯರಿಂದಲೇ ಚಿಕಿತ್ಸೆ ನೀಡಲಾಗುತ್ತಿದೆ. ಪವಿತ್ರಾ ಪರ ಅವರ ಕುಟುಂಬಸ್ಥರು ಮನೆ ಊಟಕ್ಕೆ ಕೋರ್ಟ್ ಗೆ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ. ಪೊಲೀಸ್ ಕಸ್ಟಡಿಯಲ್ಲಿರುವಾಗಲೂ ಪವಿತ್ರಾ ಒಮ್ಮೆ ಲೋ ಬಿಪಿ ಸಮಸ್ಯೆಗೊಳಗಾಗಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Vaishnavi Gowda: ನಟಿ ವೈಷ್ಣವಿ ಗೌಡ ಉತ್ತರ ಭಾರತ ಶೈಲಿಯಲ್ಲಿ ಮದುವೆಯಾಗಿದ್ದೇಕೆ

IPL 2025 ಸೋಲಿನ ಬಗ್ಗೆ ಕೊನೆಗೂ ಭಾವುಕ ಪೋಸ್ಟ್ ಹಂಚಿಕೊಂಡ ಪಂಜಾಬ್ ಒಡತಿ ಪ್ರೀತಿ ಜಿಂಟಾ

Road Accident: ಕಣ್ಣೆದುರೇ ತಂದೆಯನ್ನು ಕಳೆದುಕೊಂಡ ನಟ ಶೈನ್ ಟಾಮ್ ಚಾಕೊ

Akhil Akkineni Marriage: ಟ್ರೆಂಡಿಂಗ್‌ನಲ್ಲಿದೆ ನಾಗರ್ಜುನ ಮಗನ ಮದುವೆ ಫೋಟೋಗಳು

ಡಿವೋರ್ಸ್ ಬೆನ್ನಲ್ಲೇ ಮತ್ತೇ ಗೆಳತಿ ಜತೆ ಜೋಡಿಯಾಗಿ ಕಾಣಿಸಿಕೊಂಡ ನಟ ಜಯಂ ರವಿ, ಇದು ಅದೇ ಎಂದ ನೆಟ್ಟಿಗರು

ಮುಂದಿನ ಸುದ್ದಿ
Show comments