Select Your Language

Notifications

webdunia
webdunia
webdunia
webdunia

ಚಿರಂಜೀವಿ ಸರ್ಜಾ ನಿಧನರಾಗಿ ವಾರ ಕಳೆದ ಮೇಲೆ ದುಃಖ ಹೊರಹಾಕಿದ ಕುಟುಂಬ

ಚಿರಂಜೀವಿ ಸರ್ಜಾ ನಿಧನರಾಗಿ ವಾರ ಕಳೆದ ಮೇಲೆ ದುಃಖ ಹೊರಹಾಕಿದ ಕುಟುಂಬ
ಬೆಂಗಳೂರು , ಭಾನುವಾರ, 14 ಜೂನ್ 2020 (09:06 IST)
ಬೆಂಗಳೂರು: ಚಿರಂಜೀವಿ ಸರ್ಜಾ ಅಕಾಲಿಕವಾಗಿ ನಿಧನರಾಗಿ ಇಂದಿಗೆ ಒಂದು ವಾರ ಕಳೆದಿದೆ. ಆದರೆ ಅವರ ಅಭಿಮಾನಿಗಳು, ಕುಟುಂಬದವರು, ಆಪ್ತರಿಗೆ ಇನ್ನೂ ಚಿರು ಇಲ್ಲ ಎಂಬ ಸತ್ಯವನ್ನು ಅರಗಿಸಿಕೊಳ್ಳಲು ಕಷ್ಟವಾಗುತ್ತಿದೆ.


ಕಳೆದ ವಾರ ಇದೇ ದಿನ ಹೃದಯಾಘಾತದಿಂದಾಗಿ ಚಿರು ಹಠಾತ್ ನಿಧನರಾಗಿ ಎಲ್ಲರನ್ನೂ ಶಾಕ್ ಗೊಳಗಾಗಿಸಿದ್ದರು. ಈ ಶಾಕ್ ನಿಂದ ಹೊರಬಾರದ ಅವರ ಕುಟುಂಬ ವರ್ಗ ಮನೆ ಬಿಟ್ಟು ಎಲ್ಲೂ ಹೋಗಿಲ್ಲ.

ಆದರೆ ಸಾಮಾಜಿಕ ಜಾಲತಾಣದ ಮೂಲಕ ಸಹೋದರ ಧ್ರುವ ಸರ್ಜಾ, ಧ್ರುವ ಪತ್ನಿ ಪ್ರೇರಣಾ, ಐಶ್ವರ್ಯಾ ಸರ್ಜಾ, ಅರ್ಜುನ್ ಸರ್ಜಾ ಚಿರು ಬಗೆಗಿನ ನೆನಪುಗಳನ್ನು ಹಂಚಿಕೊಂಡು ತಮ್ಮ ದುಃಖ ಹೊರಹಾಕುತ್ತಿದ್ದಾರೆ. ಅರ್ಜುನ್ ಸರ್ಜಾ ಮೊನ್ನೆಯೇ ಮಿಸ್ ಮೈ ಬಾಯ್ ಎಂದು ಚಿರು ಜತೆಗಿನ ಖುಷಿಯ ಕ್ಷಣದ ಫೋಟೋ ಪ್ರಕಟಿಸಿದ್ದರು.

ಅದಾದ ಬಳಿಕ ಧ್ರುವ ಸರ್ಜಾ ಮತ್ತು ಐಶ್ವರ್ಯಾ ಸರ್ಜಾ ಚಿರು ಜತೆಗಿನ ಹಳೆಯ ಫೋಟೋಗಳನ್ನು ಹಂಚಿಕೊಂಡು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ದಯವಿಟ್ಟು ಮರಳಿ ಬಾ ಎಂದು ಬರೆದುಕೊಂಡಿದ್ದರು. ಇದೀಗ ಮತ್ತೆ ಧ್ರುವ ಚಿರು ಜತೆಗಿನ ಹಳೆಯ ಫೋಟೋಗಳನ್ನು ಹಾಕಿಕೊಂಡು ನಮ್ಮಣ್ಣ, ನನ್ನ ಜಗತ್ತು ಎಂದು ಬರೆದುಕೊಂಡು ನೆನಪು ಮಾಡಿಕೊಂಡಿದ್ದಾರೆ. ಧ್ರುವ ಪತ್ನಿ ಪ್ರೇರಣಾ ಕೂಡಾ ಭಾವ ಜತೆಗಿನ ಟಿಕ್ ಟಾಕ್ ವಿಡಿಯೋ ಒಂದನ್ನು ಪೋಸ್ಟ್ ಮಾಡಿ ಹೇ ಚಿರು ನಿಮ್ಮ ಸಿಲ್ಸ್ (ಅತ್ತಿಗೆ) ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದಾಳೆ ಎಂದು ಬರೆದುಕೊಂಡಿದ್ದಾರೆ. ಆದರೆ ಚಿರು ಪತ್ನಿ ಮೇಘನಾ ಇದುವರೆಗೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ವಿದ್ಯಾಭ್ಯಾಸಕ್ಕೆ ನೆರವು ನೀಡಲು ಮಗುವನ್ನು ದತ್ತು ಪಡೆದ ಕಿಚ್ಚ ಸುದೀಪ್