Select Your Language

Notifications

webdunia
webdunia
webdunia
webdunia

ನಿಮ್ಮ ಪ್ರೀತಿ, ಹಾರೈಕೆ ಇರುವವರೆಗೂ ಡಿಬಾಸ್‌ಗೆ ಏನೂ ಆಗಲ್ಲ: ದಿನಕರ್ ತೂಗುದೀಪ

Challenging Star Darshan, Dinkar Thoogudeep, Darshan Thoogudeep,

Sampriya

ತುಮಕೂರು , ಶನಿವಾರ, 5 ಅಕ್ಟೋಬರ್ 2024 (17:25 IST)
Photo Courtesy X
ತುಮಕೂರು: ಇಂದು ತುಮಕೂರಿನಲ್ಲಿ ನಡೆದ ರಾಯಲ್ ಸಿನಿಮಾದ ಕಾರ್ಯಕ್ರಮದಲ್ಲಿ ನಿರ್ದೇಶಕ ದಿನಕರ್ ತೂಗುದೀಪ ವೇದಿಕೆ ಹತ್ತಿದ್ದ ಹಾಗೇ ದರ್ಶನ್ ಅಭಿಮಾನಿಗಳು ಡಿಬಾಸ್ ಡಿಬಾಸ್ ಎಂದು ಘೋಷಣೆ ಕೂಗಿದ ಘಟನೆ ನಡೆದಿದೆ. ಸಿನಿಮಾ ಬಗ್ಗೆ ಮಾತನಾಡಲು ಶುರುಮಾಡಿದಾಗ, ದರ್ಶನ್ ಪರ ಘೋಷಣೆ ಜೋರಾಗಿ ಕೂಗಿದ್ದಾರೆ.

ಕೊನೆಗೂ ಮೌನ ಮುರಿದ ದಿನಕರ್, ನಿಮ್ಮ ಪ್ರೀತಿ, ಹಾರೈಕೆ ಇರುವವರೆಗೂ ನಿಮ್ಮ ಬಾಸ್‌ಗೆ ಏನೂ ಆಗಲ್ಲ ಎಂದು ಧೈರ್ಯ ತುಂಬಿದ್ದಾರೆ.

ರಾಯಲ್ ಸಿನಿಮಾ ಸಂಬಂಧಿ ಕಾರ್ಯಕ್ರಮದಲ್ಲಿ ದಿನಕರ್ ತೂಗುದೀಪ್ ಭಾಗಿಯಾಗಿದ್ದರು. ದಿನಕರ್ ವರು ಸಿನಿಮಾ ಬಗ್ಗೆ ಮಾತನಾಡುತ್ತಿದ್ದ ಹಾಗೇ, ಚಾಲೆಂಜಿಂಗ್ ಸ್ಟಾರ್, ಡಿ ಬಾಸ್, ಡಿಬಾಸ್ ಎಂದು ಕೂಗಿದ್ದಾರೆ. ಇದನ್ನು ಕೇಳಿದ ದಿನಕರ್ ನಿಮ್ಮ ಪ್ರೀತಿ ಅಭಿಮಾನ ಪ್ರೋತ್ಸಾಗ ಇರುವವರೆಗೂ ಡಿಬಾಸ್ ಅವರನ್ನು ಯಾವನು ಏನು ಮಾಡಕ್ಕೆ ಆಗಲ್ಲ. ನಿಮ್ಮ ಪ್ರೀತಿ ದರ್ಶನ್, ನನ್ನ ಹಾಗೂ ನಮ್ಮ ಕುಟುಂಬದ ಮೇಲೆ ಹೀಗಾ ಸದಾ ಇರಲಿ ಎಂದರು.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲು ಸೇರುತ್ತಿದ್ದ ಹಾಗೇ ಅತ್ತಿಗೆ ವಿಜಯಲಲಕ್ಷ್ಮಿ ಜತೆ ದಿನಕರ್ ತೂಗುದೀಪ್ ಕಾನೂನು ಹೋರಾಟದ ಜತೆ ದೇವರ ಮೊರೆ ಹೋಗುತ್ತಿದ್ದಾರೆ. ಅದಲ್ಲದೆ ಅತ್ತಿಗೆ ಜತೆ ಆಗಾಗ ದರ್ಶನ್‌ರನ್ನು ಭೇಟಿಯಾಗಿ ಧೈರ್ಯ ತುಂಬುತ್ತಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಶಿವಣ್ಣ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಭೈರತಿ ರಣಗಲ್ ಚಿತ್ರತಂಡ