Select Your Language

Notifications

webdunia
webdunia
webdunia
webdunia

ನಿಖಿಲ್ ಕುಮಾರಸ್ವಾಮಿ ಎಂಗೇಜ್ ಮೆಂಟ್ ಗೇ ಇಷ್ಟೊಂದು ಜನಕ್ಕೆ ಸಿದ್ಧತೆ!

ನಿಖಿಲ್ ಕುಮಾರಸ್ವಾಮಿ ಎಂಗೇಜ್ ಮೆಂಟ್ ಗೇ ಇಷ್ಟೊಂದು ಜನಕ್ಕೆ ಸಿದ್ಧತೆ!
ಬೆಂಗಳೂರು , ಬುಧವಾರ, 5 ಫೆಬ್ರವರಿ 2020 (09:18 IST)
ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ವಿವಾಹ ನಿಶ್ಚಿತಾರ್ಥವನ್ನು ಅದ್ಧೂರಿಯಾಗಿ ಮಾಡಲಿದ್ದಾರೆ.


ಈ ಮೊದಲು ಫೆಬ್ರವರಿ 10 ಕ್ಕೆ ನಿಶ್ಚಿತಾರ್ಥ ನಡೆಯಲಿದೆ ಎನ್ನಲಾಗುತ್ತಿತ್ತು. ಆದರೆ ಇದೀಗ ಫೆಬ್ರವರಿ 18 ಕ್ಕೆ ನಿಶ್ಚಿತಾರ್ಥ ಎನ್ನಲಾಗುತ್ತಿದೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಿಖಿಲ್ ಮತ್ತು ರೇವತಿ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಸುಮಾರು 5000 ಅತಿಥಿಗಳು ಆಗಮಿಸುವ ನಿರೀಕ್ಷೆಯಿದೆ ಎನ್ನಲಾಗಿದೆ.

ನಿಶ್ಚಿತಾರ್ಥವೇ ಇಷ್ಟೊಂದು ಅದ್ಧೂರಿಯಾಗಿರುವಾಗ, ವಿವಾಹವೂ ಅಷ್ಟೇ ಅದ್ಧೂರಿಯಾಗಲೇಬೇಕಲ್ಲವೇ? ಈಗಾಗಲೇ ಕುಮಾರಸ್ವಾಮಿ ತಮಗೆ ರಾಜಕೀಯ ಜನ್ಮ ನೀಡಿದ ರಾಮನಗರ, ಚನ್ನಪಟ್ಟಣದಲ್ಲೇ ವಿವಾಹ ಸಮಾರಂಭ ಮಾಡುವುದಾಗಿ ಹೇಳಿದ್ದಾರೆ. ಈ ಕಾರ್ಯಕ್ರಮ ಮುಂಬರುವ ಏಪ್ರಿಲ್ ಅಥವಾ ಮೇನಲ್ಲಿ ನಡೆಯುವ ಸಾಧ‍್ಯತೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಕ್ಕು ನಗಿಸುತ್ತಲೇ ಮೆಸೇಜ್ ನೀಡಲಿದ್ದಾನೆ ಬಿಲ್ಗೇಟ್ಸ್..!!