Select Your Language

Notifications

webdunia
webdunia
webdunia
webdunia

ಆಸ್ಕರ್ ಗೆ ಆರ್ ಆರ್ ಆರ್ ಆಯ್ಕೆಯಾಗದಿರುವುದಕ್ಕೆ ಆಯ್ಕೆ ಸಮಿತಿ ಅಧ್ಯಕ್ಷ ನಾಗಾಭರಣ ಸ್ಪಷ್ಟನೆ

ಆಸ್ಕರ್ ಗೆ ಆರ್ ಆರ್ ಆರ್ ಆಯ್ಕೆಯಾಗದಿರುವುದಕ್ಕೆ ಆಯ್ಕೆ ಸಮಿತಿ ಅಧ್ಯಕ್ಷ ನಾಗಾಭರಣ ಸ್ಪಷ್ಟನೆ
ಬೆಂಗಳೂರು , ಗುರುವಾರ, 22 ಸೆಪ್ಟಂಬರ್ 2022 (09:00 IST)
ಬೆಂಗಳೂರು: ಈ ಬಾರಿ ಆಸ್ಕರ್ ಗೆ ಭಾರತದಿಂದ ಆರ್ ಆರ್ ಆರ್ ಸಿನಿಮಾ ವಿದೇಶೀ ಸಿನಿಮಾ ವಿಭಾಗದಲ್ಲಿ ಆಯ್ಕೆಯಾಗುತ್ತದೆಂದೇ ಎಲ್ಲರ ನಿರೀಕ್ಷೆಯಾಗಿತ್ತು.

ಆದರೆ ಕೊನೆಯ ಕ್ಷಣದಲ್ಲಿ ಗುಜರಾತಿ ಸಿನಿಮಾ ಚೆಲ್ಲೋ ಶೋ ಆಯ್ಕೆಯಾಗಿತ್ತು. ಇದು ಫ್ಯಾನ್ಸ್ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಆರ್ ಆರ್ ಆರ್ ತಿರಸ್ಕೃತವಾಗಿದ್ದಕ್ಕೆ ಆಯ್ಕೆ ಸಮಿತಿ ಅಧ್ಯಕ್ಷ ಟಿ.ಎಸ್. ನಾಗಾಭರಣ ಸ್ಪಷ್ಟನೆ ನೀಡಿದ್ದಾರೆ.

‘ಒಂದು ಸಿನಿಮಾ ಆಸ್ಕರ್ ಗೆ ಆಯ್ಕೆಯಾಗಲು ಅದರ ಮಾರ್ಕೆಟಿಂಗ್, ಮಾಸ್ ಅಂಶ ಮುಖ್ಯವಾಗುವುದಿಲ್ಲ. ಕತೆ ಮುಖ್ಯ. ಆಸ್ಕರ್ ಗೆ ಆಯ್ಕೆಯಾಗಲು ಸ್ಪರ್ಧೆಗೆ ಬಂದಿದ್ದ ಎಲ್ಲಾ ಸಿನಿಮಾಗಳೂ ಅತ್ಯುತ್ತಮವಾಗಿತ್ತು. ಆರ್ ಆರ್ ಆರ್ ಕೂಡಾ ಉತ್ತಮ ಸಿನಿಮಾವೇ. ಆದರೆ ಅಂತಿಮವಾಗಿ ಚೆಲ್ಲೋ ಶೋ ಭಾರತವನ್ನು ಪ್ರತಿನಿಧಿಸುವ ಕತೆ ಹೊಂದಿರುವ ಸಿನಿಮಾ, ಒಂದು ವಿಭಿನ್ನ ಸಿನಿಮಾ ಎಂಬ ಕಾರಣಕ್ಕೆ ಆಯ್ಕೆಯಾಯಿತು. ಇದರಿಂದ ಉಳಿದವರಿಗೆ ನಿರಾಸೆಯಾಗಿರಬಹುದು. ಆದರೆ ಚೆಲ್ಲೋ ಶೋ ಭಾರತವನ್ನು ಪ್ರತಿನಿಧಿಸುವ ಒಂದು ವಿಭಿನ್ನ ಸಿನಿಮಾ’ ಎಂದು ನಾಗಾಭರಣ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಬ್ಜ ಪಾರ್ಟ್ 2 ಬಗ್ಗೆ ಸುಳಿವು ನೀಡಿದ ಆರ್.ಚಂದ್ರು