Select Your Language

Notifications

webdunia
webdunia
webdunia
webdunia

ಗಂಡ ತೀರಿಕೊಂಡ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಕೈ ಮುಗಿದು ಬೇಡಿಕೊಂಡ ನಟಿ ಮೀನಾ

ಗಂಡ ತೀರಿಕೊಂಡ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಕೈ ಮುಗಿದು ಬೇಡಿಕೊಂಡ ನಟಿ ಮೀನಾ
ಚೆನ್ನೈ , ಶನಿವಾರ, 2 ಜುಲೈ 2022 (10:00 IST)
ಚೆನ್ನೈ: ಮೊನ್ನೆಯಷ್ಟೇ ಪತಿ ವಿದ್ಯಾಸಾಗರ್ ಅನಾರೋಗ್ಯದಿಂದ ನಿಧನರಾದ ದುಃಖದಲ್ಲಿರುವ ನಟಿ ಮೀನಾ ಈಗ ಸೋಷಿಯಲ್ ಮೀಡಿಯಾದಲ್ಲಿ ಮಾಧ‍್ಯಮಗಳಿಗೆ ಮನವಿ ಮಾಡಿದ್ದಾರೆ.

ವಿದ್ಯಾಸಾಗರ್ ಅಕಾಲಿಕ ಸಾವಿಗೆ ಕಾರಣಗಳ ಬಗ್ಗೆ ಹಲವು ಊಹಾಪೋಹಗಳು ಹರಡಿದ್ದವು. ಇದರ ಬೆನ್ನಲ್ಲೇ ನಟಿ ಖುಷ್ಬೂ ತಪ್ಪು ಮಾಹಿತಿ ಹಾಕಬೇಡಿ ಎಂದು ಮನವಿ ಮಾಡಿದ್ದರು. ವಿದ್ಯಾಸಾಗರ್ ಸಾವಿಗೆ ಕೊರೋನಾ ಕಾರಣವಲ್ಲ, ಶ್ವಾಸಕೋಶದ ಸೋಂಕು ಆಗಿತ್ತು ಎಂದಿದ್ದರು.

ಇದೀಗ ಮೀನಾ ಕೂಡಾ ಇದೇ ರೀತಿ ಮನವಿ ಮಾಡಿದ್ದಾರೆ. ನಾನು ನನ್ನ ಗಂಡನನ್ನು ಕಳೆದುಕೊಂಡ ನೋವಿನಲ್ಲಿದ್ದೇನೆ. ಹೀಗಾಗಿ ಮಾಧ್ಯಮಗಳು ನನ್ನ ದುಃಖ, ಖಾಸಗಿತನಕ್ಕೆ ಬೆಲೆ ಕೊಡಬೇಕು ಎಂದು ಮನವಿ ಮಾಡುತ್ತೇನೆ. ಅವರ ಸಾವಿನ ಬಗ್ಗೆ ತಪ್ಪು ಮಾಹಿತಿಯನ್ನು ಪ್ರಸಾರ ಮಾಡುವುದನ್ನು ನಿಲ್ಲಿಸಿ. ಈ ದುಃಖದ ಸಂದರ್ಭದಲ್ಲಿ ನಮ್ಮ ಜೊತೆಗೆ ನಿಂತು ಧೈರ್ಯ ತುಂಬಿದ ಎಲ್ಲರಿಗೂ, ನನ್ನ ಗಂಡನನ್ನು ಉಳಿಸಿಕೊಳ‍್ಳಲು ಪ್ರಯತ್ನ ನಡೆಸಿದ ವೈದ್ಯರ ತಂಡಕ್ಕೆ, ಸಹಕರಿಸಿದ ಮುಖ್ಯಮಂತ್ರಿಗಳು, ಆರೋಗ್ಯ ಮಂತ್ರಿಗಳು ಹಾಗೂ ಎಲ್ಲಾ ಸ್ನೇಹಿತರು, ಮಾಧ್ಯಮ ಮಿತ್ರರಿಗೆ ಧನ್ಯವಾದ ಸಲ್ಲಿಸುತ್ತೇನೆ’ ಎಂದು ಮೀನಾ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಭೈರಾಗಿ ಯಶಸ್ಸಿಗೆ ಲೈವ್ ಬಂದು ಧನ್ಯವಾದ ಸಲ್ಲಿಸಿದ ಶಿವರಾಜ್ ಕುಮಾರ್