Select Your Language

Notifications

webdunia
webdunia
webdunia
webdunia

ನಟಿಗೆ ತಾಳಿ ಕಟ್ಟಿ ದೋಖಾ: ರೌಡಿ ಕುಣಿಗಲ್ ಗಿರಿ ಸಹೋದರ ವಿರುದ್ಧ ದೂರು

ನಟಿಗೆ ತಾಳಿ ಕಟ್ಟಿ ದೋಖಾ: ರೌಡಿ ಕುಣಿಗಲ್ ಗಿರಿ ಸಹೋದರ ವಿರುದ್ಧ ದೂರು
ಬೆಂಗಳೂರು , ಸೋಮವಾರ, 16 ಆಗಸ್ಟ್ 2021 (10:18 IST)
ಬೆಂಗಳೂರು: ಕನ್ನಡ ಧಾರವಾಹಿ, ಸಿನಿಮಾಗಳಲ್ಲಿ ಸಹಕಲಾವಿದೆಯಾಗಿ ನಟಿಸುತ್ತಿದ್ದ ನಟಿಯೊಬ್ಬರಿಗೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರೌಡಿ ಕುಣಿಗಲ್ ಗಿರಿ ಸಹೋದರ ಹರೀಶ್ ಎಂಬಾತನನ್ನು ವಿರುದ್ಧ ದೂರು ದಾಖಲಾಗಿದೆ.


ಹೆಗ್ಗನಹಳ್ಳಿ ನಿವಾಸಿಯಾದ ಯುವತಿ ಏಕಾಂಗಿಯಾಗಿ ವಾಸ ಮಾಡುತ್ತಿದ್ದರು. ಇದನ್ನು ಅರಿತ ಆರೋಪಿ ಆಕೆ ಜೊತೆ ಸ್ನೇಹ ಸಂಪಾದಿಸಿ ಪ್ರೀತಿಯ ನಾಟಕವಾಡಿದ್ದಾನೆ. ಬಳಿಕ ಮನೆಯಲ್ಲಿಯೇ ತಾಳಿ ಕಟ್ಟಿದ್ದಾನೆ. ಬಳಿಕ ಚಿನ್ನಾಭರಣ, 2.50 ಲಕ್ಷ ಹಣದೊಂದಿಗೆ ಪರಾರಿಯಾಗಿದ್ದಾನೆ.

ಕೆಲವು ದಿನಗಳ ಬಳಿಕ ಯುವತಿ ನ್ಯಾಯ ಕೇಳಲು ಆತನ ಮನೆಗೆ ಹೋದಾಗ ಅವಾಚ್ಯವಾಗಿ ನಿಂದಿಸಿದ್ದಲ್ಲದೆ, ಹಲ್ಲೆ ನಡೆಸಿದ್ದಾರೆ. ತಕ್ಷಣವೇ ಪೊಲೀಸರಿಗೆ ಯುವತಿ ದೂರು ನೀಡಿದಾಗ ವಂಚಕನ ಮನೆಯವರು ಚೆಕ್ ನೀಡಿದ್ದಾರೆ. ಆದರೆ ಈ ಚೆಕ್ ನ್ನು ಬ್ಯಾಂಕ್ ಗೆ ಹಾಕಿದಾಗ ಹಣವಿಲ್ಲ ಎಂದು ಗೊತ್ತಾಗಿದೆ. ಬಳಿಕ ಹರೀಶ್ ತನ್ನ ಸಹೋದರ ರೌಡಿ ಕುಣಿಗಲ್ ಗಿರಿ ಮೂಲಕ ಕರೆ ಮಾಡಿಸಿ ಕೊಲೆ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಯುವತಿ ಈಗ ಪೊಲೀಸರಿಗೆ ದೂರು ನೀಡಿದ್ದಾಳೆ.

Share this Story:

Follow Webdunia kannada

ಮುಂದಿನ ಸುದ್ದಿ

ಇದಾಗಿ ಮೂರು ವರ್ಷವಾಯ್ತು ಎಂದು ವಿಜಯ್ ದೇವರಕೊಂಡ ಜೊತೆಗಿನ ಫೋಟೋ ಹಂಚಿಕೊಂಡ ರಶ್ಮಿಕಾ