Select Your Language

Notifications

webdunia
webdunia
webdunia
webdunia

ಹಸಿದು ಬಂದ ಯಾರನ್ನೂ ಸುಮ್ನೇ ಕಳುಹಿಸಲ್ವಂತೆ ಕಿಚ್ಚ ಸುದೀಪ್

ಹಸಿದು ಬಂದ ಯಾರನ್ನೂ ಸುಮ್ನೇ ಕಳುಹಿಸಲ್ವಂತೆ ಕಿಚ್ಚ ಸುದೀಪ್
ಬೆಂಗಳೂರು , ಸೋಮವಾರ, 9 ಸೆಪ್ಟಂಬರ್ 2019 (09:23 IST)
ಬೆಂಗಳೂರು: ಕಿಚ್ಚ ಸುದೀಪ್ ಸಿನಿಮಾ ರಂಗದಲ್ಲಿ ಅಭಿನಯದ ಮೂಲಕ ತಮ್ಮ ಅಭಿಮಾನಿಗಳ ಪಾಲಿಗೆ ಆರಾದ್ಯ ದೈವವಾಗಿದ್ದಾರೆ. ಆದರೆ ನಿಜ ಜೀವನದಲ್ಲೂ ಕಿಚ್ಚ ಹಲವು ಬಾರಿ ತಾವು ಹೀರೋ ಎಂದು ಸಾಬೀತು ಪಡಿಸಿದ್ದಾರೆ.


ಕಷ್ಟದಲ್ಲಿರುವ ಎಷ್ಟೋ ಜನರಿಗೆ ಕಿಚ್ಚ ಮಾಡುವ ಹಲವು ರೀತಿಯಲ್ಲಿ ಮಾಡುವ ಸಹಾಯಗಳು ಕೆಲವೊಮ್ಮೆ ಸುದ್ದಿಯಾಗಿದ್ದರೆ, ಇನ್ನು ಕೆಲವೊಮ್ಮೆ ನಮಗೇ ಗೊತ್ತಿಲ್ಲದೇ ಹೋಗುತ್ತದೆ. ಆದರೆ ಈ ರೀತಿ ಸಹಾಯ ಮಾಡಲು ಕಿಚ್ಚನಿಗೆ ಸಾಧ‍್ಯವಾಗುತ್ತದೆ? ಹೀಗಂತ ಟ್ವಿಟರ್ ನಲ್ಲಿ ವ್ಯಕ್ತಿಯೊಬ್ಬರು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಕಿಚ್ಚ ನೀಡಿದ ಉತ್ತರ ನಿಜಕ್ಕೂ ಅಭಿಮಾನಿಗಳ ಮೆಚ್ಚುಗೆ ವ್ಯಕ್ತವಾಗಿದೆ.

‘ಇನ್ನೊಬ್ಬರಿಗೆ ನೀಡುವುದರಿಂದ ನಾನು ಬಡವನಾಗುವುದಿಲ್ಲ. ನನಗೆ ಊಟ ಬೇಕಾಗಿದ್ದಾಗ ನನ್ನ ತಟ್ಟೆ ಖಾಲಿಯಾಗಿತ್ತು, ಆಗಲೇ ನಾನು ಪಾಠ ಕಲಿತೆ. ಹಸಿದು ನನ್ನ ಬಳಿ ಬರುವ ಯಾರನ್ನೂ ನಾನು ನಿರಾಸೆಯಿಂದ ವಾಪಸ್ ಕಳುಹಿಸಿಲ್ಲ’ ಎಂದು ಸುದೀಪ್ ಉತ್ತರಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ಬಿಡುಗಡೆಯಾಗಿದೆ ಸಂತೋಷ್ ಚಿತ್ರಮಂದಿರದಲ್ಲಿ ಕೆಜಿಎಫ್! ಹಾಗಿದ್ರೆ ಸುದೀಪ್ ಪೈಲ್ವಾನ್ ಕತೆಯೇನು?!