Webdunia - Bharat's app for daily news and videos

Install App

BBK11: ಪುತ್ತೂರಿನ ಮುತ್ತು ಧನರಾಜ್ ಆಚಾರ್ ಗೆ ಆರಂಭದಲ್ಲೇ ಶಾಕ್ ನೀಡಿದ ಕಿಚ್ಚ ಸುದೀಪ್

Krishnaveni K
ಸೋಮವಾರ, 30 ಸೆಪ್ಟಂಬರ್ 2024 (09:48 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 11 ರ ಸ್ಪರ್ಧಿಯಾಗಿ ಪುತ್ತೂರಿನ ಮುತ್ತು ಧನರಾಜ್ ಆಚಾರ್ ಮನಯೊಳಗೆ ಪ್ರವೇಶಿಸಿದ್ದಾರೆ. ಆದರೆ ಮನೆಯೊಳಗೆ ಪ್ರವೇಶಿಸುವ ಮುನ್ನವೇ ಅವರಿಗೆ ಕಿಚ್ಚ ಸುದೀಪ್ ಶಾಕ್ ಕೊಟ್ಟಿದ್ದಾರೆ.

ರೀಲ್ಸ್ ಕಂಟೆಂಟ್ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿರುವ ಧನರಾಜ್ ಆಚಾರ್ ಸೋಷಿಯಲ್ ಮೀಡಿಯಾದಲ್ಲಿ ಸ್ಟಾರ್. ಜೊತೆಗೆ ಸ್ಯಾಂಡಲ್ ವುಡ್ ನಲ್ಲಿ, ಕಿರುತೆರೆಯಲ್ಲೂ ಸಣ್ಣ ಪುಟ್ಟ ಪಾತ್ರ ಮಾಡಿ ಮಿಂಚಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಅವರ ಕಾಮಿಡಿ ಕಂಟೆಂಟ್ ಗಳನ್ನೇ ಇಷ್ಟಪಡುವ ಪ್ರತ್ಯೇಕ ಅಭಿಮಾನಿ ವರ್ಗವೇ ಇದೆ.

ಇದೀಗ ಅವರು ಬಿಗ್ ಬಾಸ್ ಪ್ರವೇಶಿಸಿದ್ದಾರೆ. ಆದರೆ ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಮಾಡುವ ಮೊದಲು ವೇದಿಕೆಯಲ್ಲಿ ಅವರ ಹಳೆಯ ರೀಲ್ಸ್ ಒಂದನ್ನು ಪ್ಲೇ ಮಾಡಲಾಯಿತು. ಇದರಲ್ಲಿ ಅವರು ಬಿಗ್ ಬಾಸ್ ನಲ್ಲಿ ಟಿಆರ್ ಪಿಗಾಗಿ ಜಗಳ ಮಾಡಲಾಗುತ್ತದೆ ಎಂದಿದ್ದರು. ಇದನ್ನು ಅವರಿಗೆ ತೋರಿಸಿ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಂಡರು.

‘ನಾವ್ ಹೆಂಗೆ ಕಾಣಿಸ್ತೀವಿ ನಿಮಗೆ? ತಮಾಷೆ ಮಾಡೋ ವ್ಯಕ್ತಿ ಹಾಗೆ ಕಾಣಿಸ್ತೀನಾ? ಜಗಳ ಮಾಡೋದು ಟಿಆರ್ ಪಿಗಾಗಾ? ಬಿಗ್ ಬಾಸ್ ಮೇಲೆ ಗೌರವವಿಲ್ಲದ ವ್ಯಕ್ತಿನಾ ಯಾಕೆ ಕಳುಹಿಸುತ್ತಿದ್ದೀರಿ’ ಎಂದು ಸುದೀಪ್ ಗಂಭೀರವಾಗಿ ಪ್ರಶ್ನಿಸಿದರು. ಗಾಬರಿಗೊಂಡ ಧನರಾಜ್ ಅದು ತಮಾಷೆಗಾಗಿ ಮಾಡಿದ ವಿಡಿಯೋ ಎಂದು ಕ್ಷಮೆ ಕೇಳಿದರು.

ಆಗ ಸುದೀಪ್ ತಮ್ಮ ಎಂದಿನ ಶೈಲಿಯಲ್ಲೇ ನಕ್ಕರು. ಆಗ ಧನರಾಜ್ ಗೆ ಹೋದ ಜೀವ ಬಂದಂತಾಯಿತು. ಈಗಷ್ಟೇ ಧನರಾಜ್ ಗೆ ಹೆಣ್ಣು ಮಗುವಾಗಿದೆ. ಮಗುವಾಗಿ ಕೆಲವೇ ದಿನಕ್ಕೆ ಈಗ ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಮಾಡುತ್ತಿದ್ದಾರೆ. ಹಾಸ್ಯಕ್ಕೆ ಹೆಸರುವಾಸಿಯಾದ ಧನರಾಜ್ ಬಿಗ್ ಬಾಸ್ ಮನೆಯಲ್ಲೂ ನಗು ಮೂಡಿಸಬಹುದು ಎಂಬ ನಿರೀಕ್ಷೆಯಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಾಂತಾರ ಸಿನಿಮಾ ಶೂಟಿಂಗ್‌ ಅವಘಡ ಸಂಬಂಧ ಹೊಂಬಾಳೆ ಫಿಲ್ಮ್ಸ್‌ ಸ್ಪಷ್ಟನೆ

Revanth Reddy: ಅಂದು ಜೈಲಿಗಟ್ಟಿದ್ದ ನಟನಿಗೆ ಇಂದು ಕೈಯಾರೆ ಕೊಡಬೇಕಾಯಿತು ಉತ್ತಮ ನಟ ಪ್ರಶಸ್ತಿ

ಕಾಂತಾರ ಪ್ರೀಕ್ವೆಲ್‌ ಚಿತ್ರೀಕರಣದ ವೇಳೆ ಮಗುಚಿದ ದೋಣಿ: ಅಪಾಯದಿಂದ ಪಾರಾದ ರಿಷಭ್‌ ಶೆಟ್ಟಿ ಮತ್ತು ತಂಡ

ಮೀಮ್ಸ್‌, ಟ್ರೋಲ್‌ಗಳು ನನ್ನನ್ನು ವ್ಯಾಖ್ಯಾನಿಸುವುದಿಲ್ಲ: ಕಾಲೆಳೆದ ನೆಟ್ಟಿಗರಿಗೆ ಬಿಪಾಶಾ ಕ್ಲಾಸ್‌

ಚಿತ್ರರಂಗದಿಂದ ಬ್ಯಾನ್ ಆಗಿದ್ದಕ್ಕೆ ಈ ಸ್ಟಾರ್ ನಟನ ಮೊರೆ ಹೋದ ಮಡೆನೂರು ಮನು

ಮುಂದಿನ ಸುದ್ದಿ
Show comments