Select Your Language

Notifications

webdunia
webdunia
webdunia
webdunia

ಕಿಚ್ಚ ಸುದೀಪ್ ಗೆ ಬೆದರಿಕೆ ಪ್ರಕರಣದಲ್ಲಿ ಮಾಜಿ ಕಾರು ಚಾಲಕನ ವಿಚಾರಣೆ

ಕಿಚ್ಚ ಸುದೀಪ್ ಗೆ ಬೆದರಿಕೆ ಪ್ರಕರಣದಲ್ಲಿ ಮಾಜಿ ಕಾರು ಚಾಲಕನ ವಿಚಾರಣೆ
ಬೆಂಗಳೂರು , ಶುಕ್ರವಾರ, 21 ಏಪ್ರಿಲ್ 2023 (16:28 IST)
ಬೆಂಗಳೂರು: ಕಿಚ್ಚ ಸುದೀಪ್ ಗೆ ಬೆದರಿಕೆ ಪ್ರಕರಣದಲ್ಲಿ ಮಾಜಿ ಕಾರು ಚಾಲಕನನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಕೆಲವು ದಿನಗಳ ಮೊದಲು ಖಾಸಗಿ ವಿಡಿಯೋ ಲೀಕ್ ಮಾಡುವುದಾಗಿ ಬೆದರಿಕೆ ಹಾಕಿದ ಪತ್ರ ಬಂದಿತ್ತು. ಈ ಬಗ್ಗೆ ಸುದೀಪ್ ಇದು ಯಾರೋ ಸಿನಿಮಾ ರಂಗದ ತಮಗೆ ಆಗದವರೇ ಮಾಡಿದ ಕೆಲಸ ಎಂದಿದ್ದರು.

ಸುದೀಪ್ ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿಯ ಬೆನ್ನಲ್ಲೇ ಬೆದರಿಕೆ ಪತ್ರ ಬಂದಿತ್ತು. ಈ ಬಗ್ಗೆ ಸಿಸಿಬಿ ಪೊಲೀಸರು ಸುದೀಪ್ ಗೆ ಕಾರು ಚಾಲಕನಾಗಿದ್ದ ವ್ಯಕ್ತಿಯನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ. ಆದರೆ ಮೂರು ವರ್ಷಗಳ ಹಿಂದೆಯೇ ತಾನು ಕೆಲಸ ಬಿಟ್ಟಿರುವುದಾಗಿ ವ್ಯಕ್ತಿ ಹೇಳಿಕೊಂಡಿದ್ದಾನೆ. ಅಲ್ಲದೆ ಸುದೀಪ್ ಗೂ ತನಗೂ ಈಗ ಸಂಬಂಧವಿಲ್ಲ ಎನ್ನುತ್ತಿದ್ದಾನೆ. ಆದರೆ ಪೊಲೀಸರು ಆತನ ಬಗ್ಗೆ ಸಂಶಯ ಹೊಂದಿದ್ದು ತೀವ್ರ ತನಿಖೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತಮ್ಮದೇ ಜೀವನವನ್ನೇ ಸಿನಿಮಾ ಮಾಡಿದ ನರೇಶ್-ಪವಿತ್ರಾ