Select Your Language

Notifications

webdunia
webdunia
webdunia
webdunia

ಬೊಮ್ಮಾಯಿ ಮಾಮನ ಪರ ಕಿಚ್ಚ ಸುದೀಪ್ ಭರ್ಜರಿ ಚುನಾವಣಾ ಪ್ರಚಾರ

ಬೊಮ್ಮಾಯಿ ಮಾಮನ ಪರ ಕಿಚ್ಚ ಸುದೀಪ್ ಭರ್ಜರಿ ಚುನಾವಣಾ ಪ್ರಚಾರ
ಶಿಗ್ಗಾವಿ , ಬುಧವಾರ, 19 ಏಪ್ರಿಲ್ 2023 (18:22 IST)
Photo Courtesy: Twitter
ಶಿಗ್ಗಾವಿ: ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪರ ಸ್ಟಾರ್ ಪ್ರಚಾರಕರಾಗಿರುವ ಕಿಚ್ಚ ಸುದೀಪ್ ಇಂದು ಸಿಎಂ ಬೊಮ್ಮಾಯಿ ಪರ ಮತ ಯಾಚನೆ ಶುರು ಮಾಡಿದ್ದಾರೆ.

ಸಿಎಂ ಕ್ಷೇತ್ರ ಶಿಗ್ಗಾವಿಯಲ್ಲಿ ಕಿಚ್ಚನ ಚುನಾವಣಾ ಪ್ರಚಾರ ಆರಂಭವಾಗಿದೆ. ರೋಡ್ ಶೋ ಬಳಿಕ ಸಮಾವೇಶದಲ್ಲಿ ಮಾತನಾಡಿದ ಸುದೀಪ್, ಮಾಮನಿಗೆ ಸಿಕ್ಕಿರುವ ಅವಧಿ ಕಡಿಮೆ. ಇಷ್ಟು ಜನ ಸೇರಿದ್ದೀರಿ ಎಂದರೆ ಅವರು ಮಾಡಿದ ಕೆಲಸ ಏನು ಎಂದು ಅರ್ಥವಾಗುತ್ತದೆ. ಅವರ ಪರವಾಗಿ ನಾನು ಬಂದಿದ್ದೇನೆ. ಜನರಿಗೆ ಒಳ್ಳೆಯದು ಆಗಬೇಕೆಂದರೆ ಮತ್ತೊಮ್ಮೆ ಅವರನ್ನು ಗೆಲ್ಲಿಸಬೇಕು ಎಂದು ಕಿಚ್ಚ ಮನವಿ ಮಾಡಿದ್ದಾರೆ.

ಇನ್ನು, ಚುನಾವಣಾ ಪ್ರಚಾರಕ್ಕೆ ಮೊದಲು ಟ್ವೀಟ್ ಮಾಡಿರುವ ಕಿಚ್ಚ ಶ್ರೀ ಕನಕದಾಸರು ಮತ್ತು ಸಂತ ಶಿಶುನಾಳ ಶರೀಫರ ಭೂಮಿಯಲ್ಲಿ ಪ್ರಚಾರ ಕಾರ್ಯ ಆರಂಭಿಸಿದ್ದು ನಿಜಕ್ಕೂ ಸಂತೋಷ ಮತ್ತು ಹೆಮ್ಮೆಯ ವಿಷಯ. ಎಲ್ಲರಿಗೂ ಶುಭವಾಗಲಿ ಎಂದಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಶಿಗ್ಗಾವಿಯಲ್ಲಿ ಕಿಚ್ಚ ಸುದೀಪ್ ಚುನಾವಣಾ ಪ್ರಚಾರ