Select Your Language

Notifications

webdunia
webdunia
webdunia
webdunia

ಭಾರೀ ಹಿಮಪಾತದಲ್ಲಿ ಸಿಲುಕಿಕೊಂಡ 'ಕಾರ್ತಿಕೇಯ 2' ಚಿತ್ರತಂಡ; ಚಿತ್ರೀಕರಣ ಸ್ಥಗಿತ

ಭಾರೀ ಹಿಮಪಾತದಲ್ಲಿ ಸಿಲುಕಿಕೊಂಡ 'ಕಾರ್ತಿಕೇಯ 2' ಚಿತ್ರತಂಡ; ಚಿತ್ರೀಕರಣ ಸ್ಥಗಿತ
ಹೈದರಾಬಾದ್ , ಗುರುವಾರ, 25 ಮಾರ್ಚ್ 2021 (13:23 IST)
ಹೈದರಾಬಾದ್ : ನಿಖಿಲ್ ಸಿದ್ಧಾರ್ಥ ಅಭಿನಯದ “ಕಾರ್ತಿಕೇಯ 2 “ ಚಿತ್ರದ ಕೆಲವು ದೃಶ್ಯಗಳ ಚಿತ್ರೀಕರಣಗಾಗಿ ಚಿತ್ರತಂಡ ಹಿಮಾಚಲ ಪ್ರದೇಶಕ್ಕೆ ತೆರಳಿದ್ದು, ಇದೀಗ ಭಾರೀ ಹಿಮಪಾತದಿಂದ ಚಿತ್ರೀಕರಣ ಸದ್ಯಕ್ಕೆ ನಿಲ್ಲಿಸಲಾಗಿದೆ ಎನ್ನಲಾಗಿದೆ.

ಹಿಮಾಚಲ ಪ್ರದೇಶದ ಸಿಸ್ಸುವಿನಲ್ಲಿ ಭಾರೀ ಹಿಮಪಾತದಲ್ಲಿ ನಿಖಿಲ್, ನಾಯಕಿ, ಇತರ ಪಾತ್ರವರ್ಗದವರು ಮತ್ತು ಸಿಬ್ಬಂದಿಗಳು ಸೇರಿದಂತೆ ಹಲವರು ಸಿಲುಕಿಕೊಂಡಿದ್ದಾರೆ.  ಹೀಗಾಗಿ ಚಿತ್ರೀಕರಣ ಸ್ಥಗಿತಗೊಳಿಸಿದ್ದು, ಚಂಡಮಾರುತ ಹೋದ ಬಳಿಕ ಚಿತ್ರೀಕರಿಸುವುದಾಗಿ ಯೋಜಿಸುತ್ತಿದ್ದಾರೆ ಎನ್ನಲಾಗಿದೆ.

ಅಲ್ಲಿನ ಪರಿಸ್ಥಿತಿಯನ್ನು ಚಿತ್ರತಂಡ ವಿಡಿಯೋ ಮಾಡಿ ಬಿಡುಗಡೆ ಮಾಡಿದ್ದು, ಪರಿಸ್ಥಿತಿ ಸಹಜ ಸ್ಥಿತಿಗೆ ಬರುತ್ತದೆ ಚಿತ್ರತಂಡ ಸುರಕ್ಷಿತವಾಗಿ ಮರಳುವಂತೆ ಅಭಿಮಾನಿಗಳು ಹಾರೈಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತಲೈವಿ ಟ್ರೇಲರ್ ಕಂಡು ಪ್ರತಿಕ್ರಿಯಿಸಿದ ಆರ್ ಜಿ ವಿಗೆ ಕಂಗನಾ ಹೇಳಿದ್ದೇನು ಗೊತ್ತಾ?