Select Your Language

Notifications

webdunia
webdunia
webdunia
webdunia

ಕನ್ನಡತಿ ಕಿರಣ್ ರಾಜ್ ಗೆ ಅಪಘಾತ: ಆಸ್ಪತ್ರೆಗೆ ದಾಖಲು

Kiran Raj

Krishnaveni K

ಬೆಂಗಳೂರು , ಬುಧವಾರ, 11 ಸೆಪ್ಟಂಬರ್ 2024 (11:17 IST)
ಬೆಂಗಳೂರು: ಕನ್ನಡತಿ ಧಾರವಾಹಿ ಖ್ಯಾತಿಯ ನಟ ಕಿರಣ್ ರಾಜ್ ಸಂಚರಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ನಿನ್ನೆ ರಾತ್ರಿ ಅವರು ಸಂಚರಿಸುತ್ತಿದ್ದ ಮರ್ಸಿಡಸ್ ಬೆಂಜ್ ಕಾರು ಅಪಘಾತಕ್ಕೀಡಾಗಿದ್ದು, ಕಾರು ಜಖಂಗೊಂಡಿದೆ. ಘಟನೆಯಲ್ಲಿ ಕಿರಣ್ ರಾಜ್ ಎದೆಯ ಭಾಗಕ್ಕೆ ಪೆಟ್ಟಾಗಿದ್ದು, ಅವರ ಜೊತೆ ಸಂಚರಿಸುತ್ತಿದ್ದ ಸಹ ನಿರ್ಮಾಪಕರು ಯಾವುದೇ ಗಾಯಗಳಿಲ್ಲದೇ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಕಿರಣ್ ರಾಜ್ ಇದೀಗ ತಮ್ಮ ನಟನೆಯ ‘ರಾನಿ’ ಸಿನಿಮಾ ಪ್ರಚಾರ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಇದರ ನಡುವೆಯೇ ಈ ಘಟನೆ ನಡೆದಿದೆ. ನಟನೆಯ ಜೊತೆಗೆ ಕಿರಣ್ ರಾಜ್ ಅನೇಕ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅದರ ಭಾಗವಾಗಿ ನಿನ್ನೆ ಸಿದ್ಧೇಶ್ವರ ನಿರಾಶ್ರಿತರ ಕೇಂದ್ರಕ್ಕೆ ತೆರಳಿ ಮರಳುತ್ತಿದ್ದಾಗ ಘಟನೆ ನಡೆದಿದೆ.

ಸದ್ಯಕ್ಕೆ ಅವರನ್ನು ಕೆಂಗೇರಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕನ್ನಡ ಕಿರುತೆರೆ ಮತ್ತು ಸ್ಯಾಂಡಲ್ ವುಡ್ ನಲ್ಲಿ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿರುವ ಕಿರಣ್ ರಾಜ್ ಈಗ ತಮ್ಮ ರಾನಿ ಸಿನಿಮಾ ಬಿಡುಗಡೆ ಹಂತದಲ್ಲೇ ಇಂತಹದ್ದೊಂದು ಅಪಘಾತಕ್ಕೀಡಾಗಿರುವುದು ಬೇಸರದ ಸಂಗತಿ.

Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ದು ಇಟ್ಕೊಂಡು ನಮ್ ಬಾಸ್ ಗೇ ಟಾಂಗ್ ಕೊಡ್ತೀರಾ: ಧ್ರುವ ಸರ್ಜಾಗೆ ದರ್ಶನ್ ಫ್ಯಾನ್ಸ್ ಟಾಂಗ್