Select Your Language

Notifications

webdunia
webdunia
webdunia
webdunia

ಉಡುಪಿ ಕೃಷ್ಣ ಮಠಕ್ಕೆ ಜೂ.ಎನ್‌ಟಿಆರ್‌ ಭೇಟಿ : ಇದೇ ತಾಯಿಯ ಬರ್ತಡೇಗೆ ಸ್ಪೆಷಲ್ ಗಿಫ್ಟ್‌

Junior NTR
Photo Courtesy X
ಉಡುಪಿ: ತೆಲುಗು ನಟ ಜೂನಿಯರ್ ಎನ್‌ಟಿಆರ್‌, ನಟ ರಿಷಭ್ ಶೆಟ್ಟಿ, ನಿರ್ದೇಶಕ ಪ್ರಶಾಂತ್ ನೀಲ್  ಅವರು ಉಡುಪಿಯ ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಜೂ ಎನ್‌ಟಿಆರ್ ಪತ್ನಿ, ತಾಯಿ ಮತ್ತು  ರಿಷಭ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ಇದ್ದರು.

ದೇವಸ್ಥಾನಕ್ಕೆ ಭೇಟಿ ನೀಡಿದ ಬಗ್ಗೆ ಜೂ ಎನ್‌ಟಿಆರ್ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಫೋಟೋ ಹಂಚಿ, ಇದು ನಮ್ಮ ಅಮ್ಮನ ದೊಡ್ಡ ಕನಸ್ಸಾಗಿತ್ತು ಎಂದಿದ್ದಾರೆ.


webdunia
Photo Courtesy X
ಅಮ್ಮನ ಹುಟ್ಟೂರು ಕುಂದಾಪುರಕ್ಕೆ ಕರೆತಂದು ಉಡುಪಿ ಶ್ರೀಕೃಷ್ಣಮಠದಲ್ಲಿ ದರ್ಶನ ಪಡೆಯಬೇಕೆಂಬುದು ನನ್ನ  ತಾಯಿಯ ಬಹುದೊಡ್ಡ ಕನಸು, ಕೊನೆಗೂ ಈಡೇರಿದೆ. ಆಕೆಯ ಹುಟ್ಟುಹಬ್ಬ ಸೆಪ್ಟೆಂಬರ್ 2ರ ಮುಂಚೆ ಅದು ಈಡೇರಿದ್ದು,ನಾನು ಅವಳಿಗೆ ನೀಡಬಹುದಾದ ಅತ್ಯುತ್ತಮ ಉಡುಗೊರೆಯಾಗಿದೆ.

ವಿಜಯ್ ಕಿರಗಂನದೂರು,  ಸ್ನೇಹಿತ ಪ್ರಶಾಂತ್ ನೀಲ್, ಆತ್ಮೀಯ ಗೆಳೆಯ ರಿಷಭ್ ಶೆಟ್ಟಿ ಅವರಿಗೆ ವಿಶೇಷ ಧನ್ಯವಾದಗಳು. ಇವರ ಉಪಸ್ಥಿತಿ ತುಂಬಾನೇ ಖುಷಿ ನೀಡಿತು ಎಂದು ಬರೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟಿಯರ ಕ್ಯಾರವಾನ್‌ಗಳಲ್ಲಿ ಗುಪ್ತ ಕ್ಯಾಮರಾ, ಹೊಸ ಬಾಂಬ್ ಸಿಡಿಸಿದ ರಾಧಿಕಾ ಶರತ್‌ಕುಮಾರ್