Select Your Language

Notifications

webdunia
webdunia
webdunia
webdunia

ಜೂ.ಎನ್‌ಟಿಆರ್ ಫ್ಯಾಮಿಲಿಗೆ ಕೆರಾಡಿ ಕಾಡು ಸುತ್ತಾಡಿಸಿದ ರಿಷಭ್ ಶೆಟ್ಟಿ

ಜೂ.ಎನ್‌ಟಿಆರ್ ಫ್ಯಾಮಿಲಿಗೆ ಕೆರಾಡಿ ಕಾಡು ಸುತ್ತಾಡಿಸಿದ ರಿಷಭ್ ಶೆಟ್ಟಿ

Sampriya

ಬೆಂಗಳೂರು , ಶುಕ್ರವಾರ, 6 ಸೆಪ್ಟಂಬರ್ 2024 (19:05 IST)
Photo Courtesy X
ತೆಲುಗು ಚಿತ್ರರಂಗದ ಸೂಪರ್‌ಸ್ಟಾರ್ ಜೂನಿಯರ್ ಎನ್‌ಟಿಆರ್ ಫ್ಯಾಮಿಲಿ ಹಾಗೂ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಕುಟುಂಬ ಕೆರಾಡಿಗೆ ಭೇಟಿಕೊಟ್ಟ ಸುಂದರ ಕ್ಷಣಗಳನ್ನು ಪ್ರಗತಿ ಶೆಟ್ಟಿ ಅವರು ಶೇರ್ ಮಾಡಿದ್ದಾರೆ.

ಈಚೆಗೆ ಜೂನಿಯರ್ ಎನ್‌ಟಿಆರ್, ಪ್ರಶಾಂತ್ ನೀಲ್, ರಿಷಭ್ ಶೆಟ್ಟಿ ಕುಟುಂಬ ಉಡುಪಿಯ ಕೃಷ್ಣಮಠ, ಕೊಲ್ಲೂರು ಮುಕಾಂಬಿಕೆಯ ದರ್ಶನ ಪಡೆದರು. ಅದಲ್ಲದೆ ರಿಷಭ್ ಶೆಟ್ಟಿ ತನ್ನೂರಿನ ಹೆಸರಾಂತ ಕೆರಾಡಿಯ ಮೂಡುಗಲ್ಲ ಶ್ರೀ ಕೇಶವನಾಥೇಶ್ವರ ದೇವಸ್ಥಾನ ದರ್ಶನವನ್ನು ಜೂನಿಯರ್ ಎನ್‌ಟಿಆರ್‌ ಮಾಡಿಸಿದರು.

ನಿರ್ದೇಶಕ, ನಟ ರಿಷಭ್ ಶೆಟ್ಟಿ ತನ್ನ ಹುಟ್ಟೂರಿನ ಸುಂದರ ಪರಿಸರವನ್ನು ಅವರಿಗೆ ಪರಿಚಯಿಸಿದರು. ಈ ವೇಳೆ ತೆಗೆದ ಫೋಟೋಗಳನ್ನು ಪ್ರಗತಿ ಶೆಟ್ಟಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೆರ್ ಮಾಡಿಕೊಂಡಿದ್ದಾರೆ.

ಫೋಟೋಗೆ ಪ್ರೀತಿ ಮತ್ತು ನಗುವಿನಿಂದ ಸುತ್ತುವರಿದಿದೆ, ಈ ಕ್ಷಣಗಳಿಗೆ ಯಾವಾಗಲೂ ಕೃತಜ್ಞೆ ಎಂದು ಬರೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗಲ್ಲಾಪೆಟ್ಟಿಗೆ ಮಿಸ್ಟರ್ ಬಚ್ಚನ್ ಸೋತರು ನಿರ್ಮಾಪಕರ ಕೈ ಹಿಡಿದ ನಟ ರವಿತೇಜ