Select Your Language

Notifications

webdunia
webdunia
webdunia
webdunia

ಈ ಕಾರಣಕ್ಕೆ ಹುಟ್ಟೂರಿನ ದೇವಾಲಯ ಪುನರ್ ನಿರ್ಮಾಣಕ್ಕೆ ಮುಂದಾದ ಜಗ್ಗೇಶ್

ಈ ಕಾರಣಕ್ಕೆ ಹುಟ್ಟೂರಿನ ದೇವಾಲಯ ಪುನರ್ ನಿರ್ಮಾಣಕ್ಕೆ ಮುಂದಾದ ಜಗ್ಗೇಶ್
ಬೆಂಗಳೂರು , ಮಂಗಳವಾರ, 30 ಮಾರ್ಚ್ 2021 (09:18 IST)
ಬೆಂಗಳೂರು: ನವರಸನಾಯಕ ಜಗ್ಗೇಶ್ ದೈವಭಕ್ತಿ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಇದೀಗ ಜಗ್ಗೇಶ್ ತಮ್ಮ ಊರಿನ ದೇವಾಲಯವೊಂದರ ಪುನರ್ ನಿರ್ಮಾಣ ಮಾಡಲು ಹೊರಟಿದ್ದಾರೆ. ಅದಕ್ಕೆ ಅವರು ನೀಡಿದ ಕಾರಣವೂ ವಿಶೇಷವಾಗಿದೆ.


ಜಗ್ಗೇಶ್ ತಮ್ಮ ಊರಿನ ಶಿಥಿಲ ಬಿದ್ದಿರುವ ದೇವಿ ಆಲಯವನ್ನು ಪುನರ್ ನಿರ್ಮಾಣ ಮಾಡಲಿದ್ದಾರಂತೆ.  ಇದಕ್ಕೆ ಕಾರಣ ಏನೆಂದು ಅವರೇ ಹೇಳಿಕೊಂಡಿದ್ದಾರೆ.

‘ಕೇದಾರ ಶ್ರೀಗಳು ನನ್ನನ್ನು ಸ್ಪರ್ಶಿಸಿ ನಿನ್ನ ಗ್ರಾಮದ ದೇವಿ ಆಲಯ ಪುನರ್ ನಿರ್ಮಾಣ ಮಾಡಬೇಕು, ನೀನು ಹುಟ್ಟಿರುವುದೇ ಈ ಕಾರ್ಯ ದೇವಿಗಾಗಿ ಮಾಡಲು ಎಂದು ಆಜ್ಞೆ ಮಾಡಿದ್ದಾಳೆ ಎಂದು ನನ್ನ ಗ್ರಾಮದ ಆಲಯ ನೋಡದೇ ಹೇಳಿಬಿಟ್ಟರು. ನಿನ್ನೆಯಿಂದ ಅದೇ ಚಿಂತೆಯಲ್ಲಿ ಮುಳುಗಿರುವೆ. ಇದು ಕಟ್ಟಿಸಿದರೆ ನನ್ನ ಬದುಕಿನ 4 ನೆಯ ಆಲಯವಾಗುತ್ತದೆ. ಇದಕ್ಕಾಗಿ ಯಾರಿಂದಲೂ ಫಂಡ್ ಕಲೆಕ್ಟ್ ಮಾಡಲ್ಲ. ನನ್ನ ಸ್ವಂತ ದುಡಿಮೆಯಿಂದ ಕಟ್ಟಿಸುವೆ’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

‘ಸರ್ಕಾರು ವಾರಿ ಪಾಟಾ’ ಚಿತ್ರದ ಚಿತ್ರೀಕರಣ ರದ್ದು