ಕೆಜಿಎಫ್ ಚಿತ್ರ ತುಳಿಯಲು ಸಾಥ್ ನೀಡುವವರಿಗೆ ತಕ್ಕ ಉತ್ತರ ಕೊಟ್ಟ ನಟ ಜಗ್ಗೇಶ್

Webdunia
ಶುಕ್ರವಾರ, 9 ನವೆಂಬರ್ 2018 (07:03 IST)
ಬೆಂಗಳೂರು : ಬಾಲಿವುಡ್ ನ ಬಾದ್ ಶಾ ಶಾರುಖ್ ಖಾನ್ ಹಾಗೂ ಸ್ಯಾಂಡಲ್ ವುಡ್ ನಟ ರಾಕಿಂಗ್ ಸ್ಟಾರ್ ಯಶ್ ಅಭಿಮಾನಗಳ ನಡುವೆ ವಾರ್ ಶುರುವಾಗಿದೆ.


ಹೌದು. ಸ್ಯಾಂಡಲ್ ವುಡ್ ನಟ ರಾಕಿಂಗ್ ಸ್ಟಾರ್ ಯಶ್ ನಟಿಸಿದ ‘ಕೆಜಿಎಫ್’ ಹಾಗೂ ಬಾಲಿವುಡ್ ನ ಬಾದ್ ಶಾ ಶಾರುಖ್ ಖಾನ್ ಅವರ ‘ಜೀರೋ’ ಸಿನಿಮಾ ಒಂದೇ ದಿನ ರಿಲೀಸ್ ಆಗುತ್ತಿದೆ. ಈ ವಿಚಾರಕ್ಕೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ  ಅಭಿಮಾನಿಗಳ ನಡುವೆ ಕಿತ್ತಾಟ ಶುರುವಾಗಿದೆ. ಜೀರೋ ಮುಂದೆ ಕೆಜಿಎಫ್ ತೆರೆಗೆಲೆಯಂತೆ ಹಾರಿ ಹೋಗುತ್ತೆ ಅಂತಾ ಶಾರುಖ್ ಅಭಿಮಾನಿಗಳು ಬಿಲ್ಡಪ್ ಕೊಡುತ್ತಿದ್ದರೆ, ಅಣ್ತಮ್ಮಾ ರಿಲೀಸ್​ಗೂ ಮುನ್ನವೇ ಕೆಜಿಎಫ್​ ಗೆದ್ದಾಗಿದೆ ಅಂತಾ ರಾಕಿಂಗ್ ಸ್ಟಾರ್ ಅಭಿಮಾನಿಗಳು ಕಾಲರ್ ಏರಿಸಿ ಹೇಳುತ್ತಿದ್ದಾರೆ. ಅಲ್ಲದೇ ಕನ್ನಡದ ಈ ಚಿತ್ರವನ್ನು ತುಳಿಯಲು ನಮ್ಮವರೇ ಸಾಥ್ ಕೊಡುತ್ತಿದ್ದಾರೆ ಎನ್ನುವ ಮಾತು ಕೂಡ ಕೇಳಿ ಬರುತ್ತಿದೆ.


ಈ ಬಗ್ಗೆ ಟ್ವೀಟರ್ ನಲ್ಲಿ  ಪ್ರತಿಕ್ರಿಯೆ ನೀಡಿರುವ ನಟ ಜಗ್ಗೇಶ್ ಅವರು 'ಕನ್ನಡತಿ ಕಿತ್ತೂರು ಚನ್ನಮ್ಮನ ಬೆನ್ನಿಗೆ ಚೂರಿ ಹಾಕಿದವನು ಕನ್ನಡನಾಡಿನ ಅನ್ನ ತಿಂದ ಮಲ್ಲಪ್ಪನೆ ಅಲ್ಲವೆ..!! ಎಲ್ಲ ಕಾಲದಲ್ಲೂ ಇಂಥ ಮುಖವಾಡ ತೊಟ್ಟು ಬೆನ್ನಿಗೆ ಚೂರಿ ಹಾಕುವವರು ಇದ್ದೆ ಇರುತ್ತಾರೆ..!! ಅವರ ಸಂಖ್ಯೆ ಕಮ್ಮಿ , ಶಬ್ಧಜಾಸ್ತಿ..!! ಉದಾಸೀನವೆ ಶ್ರೇಷ್ಠ..!! ಅಂಥವರು ಅಭಿಮಾನದ ಕೋಟಿಹಸ್ತಗಳ ಚಪ್ಪಾಳೆ ಸದ್ಧಿನಲ್ಲಿ ಕಳೆದುಹೋಗುತ್ತಾರೆ ಎಂದು ಹೇಳಿದ್ದಾರೆ.


ಮತ್ತೊಂದು ಟ್ವೀಟ್​ನಲ್ಲಿ 'ಕನ್ನಡದ ಬೆಳವಣಿಗೆಗೆ ಶ್ರಮಿಸುವ ಯಾರೇ ಆಗಲಿ ಅವರ ಭುಜತಟ್ಟಿ ಹುರಿದುಂಬಿಸುವವನೇ ನಿಜವಾದ ಕನ್ನಡಿಗ. ಅಸೂಯೆ ಪಡುವವನು ಸಾಧಿಸಲಾಗದ ಸಾಧಿಸಿದವರನ್ನು ಸಹಿಸದಲಾಗದ ನಿಶ್ಪ್ರಯೋಜಕ. ಹೆಮ್ಮೆ ಪಡಿ ನಮ್ಮ ಕಲಾ ಬಂಧುಗಳಿಂದ ಕನ್ನಡ ಚಿತ್ರರಂಗ ಮುಂಚೂಣಿಗೆ ನುಗ್ಗುತ್ತಿದೆ.  ಪರಭಾಷಿಕರಿಗೆ ಕನ್ನಡಚಿತ್ರರಂಗ ಕುತೂಹಲ ಮೂಡಿಸುತ್ತಿದೆ. ಹೆಮ್ಮೆಯಿಂದ ಜೈ ಅನ್ನಿ' ಎಂದು ಕೆಜಿಎಫ್​​ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಗುರುತಿಸಲಾಗದಂತಹ ರೂಪದಲ್ಲಿ ಸಲ್ಮಾನ್ ಖಾನ್, ಬಾಲಿವುಡ್‌ ಸುಲ್ತಾನ್ ಹೊಸ ಲುಕ್ ಕಂಡು ಅಭಿಮಾನಿಗಳು ಶಾಕ್, Video

ಬಾಲಿವುಡ್‌ ಅಂಗಳದಲ್ಲಿ ಯಶ್ ಕನ್ನಡದ ಕಂಪು, ರಾಮಾಯಣ ವೇದಿಕೆ ಹತ್ತುತ್ತಿದ್ದ ಹಾಗೇ ರಾಕಿ ಬಾಯ್ ಮಾಡಿದ ಕೆಲಸಕ್ಕೆ ಕನ್ನಡಿಗರು ಫಿದಾ, Video

ಲವ್‌ ಜಿಹಾದ್‌ಗೆ ಉತ್ತೇಜನ, ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅಮೀರ್ ಖಾನ್‌ಗೆ ಬಿಷ್ಣೋಯ್ ಗ್ಯಾಂಗ್‌ನಿಂದ ಬೆದರಿಕೆ

ಹಂಸಲೇಖಾರಿಗೆ ಪದ್ಮ ಪ್ರಶಸ್ತಿ ಇಲ್ಲವೇ ಜ್ಞಾನ ಪೀಠ ಕೊಡಬೇಕು ಎಂದು ನೆನಪಿರಲಿ ಪ್ರೇಮ್ ಅಭಿಯಾನ: ನೆಟ್ಟಿಗರು ಏನಂದ್ರು ಗೊತ್ತಾ

ಮುಂದಿನ ಸುದ್ದಿ
Show comments