Select Your Language

Notifications

webdunia
webdunia
webdunia
webdunia

ಶಿವಣ್ಣನೇ ಕರೆದರೂ ಸಭೆಗೆ ಗೈರಾಗಿದ್ದಕ್ಕೆ ಕಾರಣ ತಿಳಿಸಿದ ಜಗ್ಗೇಶ್

ಶಿವಣ್ಣನೇ ಕರೆದರೂ ಸಭೆಗೆ ಗೈರಾಗಿದ್ದಕ್ಕೆ ಕಾರಣ ತಿಳಿಸಿದ ಜಗ್ಗೇಶ್
ಬೆಂಗಳೂರು , ಗುರುವಾರ, 30 ಜುಲೈ 2020 (12:47 IST)
ಬೆಂಗಳೂರು: ಸ್ಯಾಂಡಲ್ ವುಡ್ ನ ಪ್ರಸಕ್ತ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ಮನವಿ ಮಾಡಲು ಶಿವರಾಜ್ ಕುಮಾರ್ ನಿವಾಸದಲ್ಲಿ ನಿನ್ನೆ ನಡೆದ ಸಭೆಯಲ್ಲಿ ಪಾಲ್ಗೊಳ್ಳದೇ ಇರುವುದಕ್ಕೆ ನವರಸನಾಯಕ ಜಗ್ಗೇಶ್ ಕಾರಣ ತಿಳಿಸಿದ್ದಾರೆ.


ಈ ಸಭೆಯಲ್ಲಿ ಕಿಚ್ಚ ಸುದೀಪ್, ದರ್ಶನ್ ಹೊರತಾಗಿ ಜಗ್ಗೇಶ್ ಕೂಡಾ ಗೈರಾಗಿದ್ದರು. ಜಗ್ಗೇಶ್ ತಮಗೂ ಶಿವರಾಜ್ ಕುಮಾರ್ ಕರೆ ಮಾಡಿದ್ದರು. ಆದರೆ ಗೈರಾಗುವುದಕ್ಕೆ ಕಾರಣ ಕೊರೋನಾ ಎಂದಿದ್ದಾರೆ.

‘ಕೊರೋನಾ ಮುಗಿಯುವವರೆಗೆ ಮನೆಯಿಂದ ಹೊರಗೂ ಬರಲ್ಲ ಎಂದುಕೊಂಡಿದ್ದೇನೆ. ಹೀಗಾಗಿ ಹೋಗಲಿಲ್ಲ. ಶಿವಣ್ಣ ಕರೆ ಮಾಡಿದಾಗಲೇ ಹೇಳಿದ್ದೆ. ಆನ್ ಲೈನ್ ನಲ್ಲೇ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸುತ್ತಿರುವೆ’ ಎಂದು ಸಮಜಾಯಿಷಿ ನೀಡಿದ್ದಾರೆ. ಜಗ್ಗೇಶ್ ಸ್ವತಃ ಬಿಜೆಪಿ ನಾಯಕರಾಗಿರುವುದರಿಂದ ಈ ಸಭೆಯಲ್ಲಿ ಪಾಲ್ಗೊಂಡು ಚಿತ್ರರಂಗದ ಸಮಸ್ಯೆಗೆ ಧ್ವನಿಯಾಗಬೇಕಿತ್ತು ಎಂಬ ಅಪಸ್ವರ ಕೇಳಿಬಂದ ಹಿನ್ನಲೆಯಲ್ಲಿ ಅವರು ಈ ಸ್ಪಷ್ಟನೆ ನೀಡಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಪವನ್ ಕಲ್ಯಾಣ್ ಮತ್ತು ರಾಮ್ ಗೋಪಾಲ್ ವರ್ಮಾ ಬಗ್ಗೆ ಪ್ರಕಾಶ್ ರೈ ಹೇಳಿದ್ದೇನು?