Select Your Language

Notifications

webdunia
webdunia
webdunia
webdunia

ರಕ್ಷಿತ್ ಶೆಟ್ಟಿ ಕನ್ನಡದ ಅಮೀರ್ ಖಾನ್ ಎಂದು ಹೊಗಳಿದ ನವರಸನಾಯಕ ಜಗ್ಗೇಶ್

ರಕ್ಷಿತ್ ಶೆಟ್ಟಿ ಕನ್ನಡದ ಅಮೀರ್ ಖಾನ್ ಎಂದು ಹೊಗಳಿದ ನವರಸನಾಯಕ ಜಗ್ಗೇಶ್
ಬೆಂಗಳೂರು , ಬುಧವಾರ, 15 ಜೂನ್ 2022 (10:20 IST)
ಬೆಂಗಳೂರು: 777 ಚಾರ್ಲಿ ಸಿನಿಮಾದಲ್ಲಿ ನಾಯಿ ಜೊತೆ ಅಭಿನಯಿಸಿದ ರಕ್ಷಿತ್ ಶೆಟ್ಟಿ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ನಡುವೆ ಸಿಎಂ ಬಸವರಾಜ ಬೊಮ್ಮಾಯಿ ಕೂಡಾ ಸಿನಿಮಾ ವೀಕ್ಷಿಸಿ ಭಾವುಕರಾಗಿ ಪ್ರತಿಕ್ರಿಯೆ ನೀಡಿದ್ದರು.

ಈ ವೇಳೆ ಸಿಎಂ ಜೊತೆ ಸಿನಿಮಾ ವೀಕ್ಷಿಸಿದ ನವರಸನಾಯಕ ಜಗ್ಗೇಶ್, ರಕ್ಷಿತ್ ಶೆಟ್ಟಿ ಕನ್ನಡದ ಅಮೀರ್ ಖಾನ್ ಎಂದು ಹಾಡಿಹೊಗಳಿದ್ದಾರೆ.

‘ನಮ್ಮ ರಕ್ಷಿತ್ ಶೆಟ್ಟಿ ಕನ್ನಡದ ಅಮೀರ್ ಖಾನ್. ಪ್ರಾಣಿಗಳ ಬಗ್ಗೆ ನಾನು ಎರಡು ಸಿನಿಮಾಗಳನ್ನು ನೋಡಿದ್ದೇನೆ. ಅದರಲ್ಲಿ ಒಂದು ಇಂಗ್ಲಿಷ್ ನಲ್ಲಿ. ಆಗ ಕನ್ನಡದಲ್ಲೂ ಈ ಥರ ಸಿನಿಮಾ ಮಾಡಬಹುದಾ ಎಂದು ಯೋಚಿಸಿದ್ದೆ. ಅದನ್ನು ರಕ್ಷಿತ್ ಮಾಡಿದ್ದಾನೆ. ಪ್ರಾಣಿಪ್ರಿಯರಿಗೆ ಈ ಸಿನಿಮಾ ಕಾಡುತ್ತೆ’ ಎಂದು ಜಗ್ಗೇಶ್ ಹೊಗಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶೂಟಿಂಗ್ ನಲ್ಲಿ ಅಸ್ವಸ್ಥ: ಆಸ್ಪತ್ರೆ ಸೇರಿದ್ದ ದೀಪಿಕಾ ಪಡುಕೋಣೆ