Select Your Language

Notifications

webdunia
webdunia
webdunia
webdunia

ಸುಶಾಂತ್ ಸಾವಿಗೆ ಇದುವೇ ಕಾರಣ? ಹೊಸ ದಿಕ್ಕಿನಲ್ಲಿ ಪೊಲೀಸರ ತನಿಖೆ

ಸುಶಾಂತ್ ಸಾವಿಗೆ ಇದುವೇ ಕಾರಣ? ಹೊಸ ದಿಕ್ಕಿನಲ್ಲಿ ಪೊಲೀಸರ ತನಿಖೆ
ಮುಂಬೈ , ಬುಧವಾರ, 17 ಜೂನ್ 2020 (09:43 IST)
ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ವೃತ್ತಿ ವೈಷಮ್ಯ ಕಾರಣವಾಯಿತೇ? ಈ ದಿಕ್ಕಿನಲ್ಲಿ ಪೊಲೀಸರು ತನಿಖೆ ನಡೆಸಲಿದ್ದಾರೆ ಎಂದು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್ ಹೇಳಿದ್ದಾರೆ.


ಬಾಲಿವುಡ್ ನಲ್ಲಿ ಸ್ವಜನ ಪಕ್ಷಪಾತ, ಗಾಡ್ ಫಾದರ್ ಗಳಿಲ್ಲದೇ ಚಿತ್ರರಂಗಕ್ಕೆ ಬಂದವರನ್ನು ತುಳಿಯಲಾಗುತ್ತದೆ. ಇಂತಹ ವೈಷಮ್ಯದಿಂದಾಗಿಯೇ ಸುಶಾಂತ್ ಮಾನಸಿಕವಾಗಿ ಕುಗ್ಗಿ ಹೋಗಿದ್ದರು ಎಂದು ಅಭಿಮಾನಿಗಳು, ಬಾಲಿವುಡ್ ನ  ಕೆಲವು ಮಂದಿ ದೂರಿದ್ದರು.

ಕಳೆದ ಆರು ತಿಂಗಳಲ್ಲಿ ಸುಶಾಂತ್ ಕೈಯಲ್ಲಿದ್ದ ಒಟ್ಟು ಏಳು ಸಿನಿಮಾಗಳು ಕೈ ತಪ್ಪಿ ಹೋಗಿತ್ತು. ಈ ಎಲ್ಲಾ ಬೆಳವಣಿಗೆ ಹಿನ್ನಲೆಯಲ್ಲಿ ಅವರು ಕುಗ್ಗಿ ಹೋಗಿದ್ದರು ಎನ್ನಲಾಗಿದೆ. ಹೀಗಾಗಿ ವೃತ್ತಿ ವೈಷಮ್ಯವೇ ಸಾವಿಗೆ ಕಾರಣವಾಯಿತೇ ಎಂಬ ದಿಕ್ಕಿನಲ್ಲಿ ತನಿಖೆ ನಡೆಯಲಿದೆ ಎಂದು ಗೃಹ ಸಚಿವರು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಚೀನಾ ಯೋಧರ ಕಾಳಗ: ಹುತಾತ್ಮ ಯೋಧರಿಗೆ ಸ್ಯಾಂಡಲ್ ವುಡ್ ನಟರ ನುಡಿ ನಮನ