Publish Date: Thu, 15 Jul 2021 (10:14 IST)
Updated Date: Thu, 15 Jul 2021 (10:15 IST)
ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣದಲ್ಲಿ ಸೆಲೆಬ್ರಿಟಿಗಳ ವಿರುದ್ಧ ಮಾತನಾಡಿ ಭಾರೀ ಸುದ್ದಿಯಾಗಿದ್ದ ನಿರ್ದೇಶಕ, ಪತ್ರಕರ್ತ ಇಂದ್ರಜಿತ್ ಲಂಕೇಶ್ ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಮಾಧ್ಯಮಗಳ ಮುಂದೆ ಮಾತನಾಡಿರುವ ಇಂದ್ರಜಿತ್ ಈ ವಂಚನೆ ಪ್ರಕರಣ ಆಗುವ ಕೆಲವು ದಿನಗಳ ಮುಂಚೆ ಮೈಸೂರಿನಲ್ಲಿ ಸ್ಟಾರ್ ಹೋಟೆಲ್ ನಲ್ಲಿ ಒಬ್ಬ ಬಡಪಾಯಿ ಸಪ್ಲೈಯರ್ ಮೇಲೆ ಹಲ್ಲೆ ನಡೆದಿದೆ. ಮರುದಿನ ಆತನ ಹೆಂಡತಿ ಪೊಲೀಸರಿಗೆ ದೂರು ನೀಡಲು ಹೊರಟಾಗ ಇದೇ ದರ್ಶನ್ ಮತ್ತು ಸ್ನೇಹಿತರು ಎಲ್ಲವನ್ನೂ ಸೆಟ್ಲ್ ಮೆಂಟ್ ಮಾಡುತ್ತಾರೆ.
ಮೈಸೂರಿನ ಪೊಲೀಸ್ ಠಾಣೆ ಈಗ ಸೆಟ್ಲ್ ಮೆಂಟ್ ಕೇಂದ್ರವಾಗಿ ಬದಲಾಗಿದೆ. ಇದೆಲ್ಲವನ್ನೂ ನಾನು ಗೃಹ ಸಚಿವರ ಗಮನಕ್ಕೆ ತಂದಿದ್ದೇನೆ ಎಂದು ಇಂದ್ರಜಿತ್ ಲಂಕೇಶ್ ಸ್ಪೋಟಕ ಮಾಹಿತಿ ಹೊರಹಾಕಿದ್ದಾರೆ.