Select Your Language

Notifications

webdunia
webdunia
webdunia
webdunia

ಎಚ್ ಡಿಕೆ ಬೆಂಬಲಿಗರಿಂದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ನಿವಾಸಕ್ಕೆ ಮುತ್ತಿಗೆ

ಎಚ್ ಡಿಕೆ ಬೆಂಬಲಿಗರಿಂದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ನಿವಾಸಕ್ಕೆ ಮುತ್ತಿಗೆ
ಬೆಂಗಳೂರು , ಶನಿವಾರ, 10 ಜುಲೈ 2021 (09:30 IST)
ಬೆಂಗಳೂರು: ಸುಮಲತಾ ಅಂಬರೀಶ್-ಎಚ್ ಡಿಕೆ ನಡುವಿನ ಟಾಕ್ ವಾರ್ ಸಂಬಂಧ ಹೇಳಿಕೆ ನೀಡಿದ್ದ ಸ್ಯಾಂಡಲ್ ವುಡ್ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ವಿರುದ್ಧ ಕುಮಾರಸ್ವಾಮಿ ಅಭಿಮಾನಿಗಳಿಂದ ಪ್ರತಿಭಟನೆ ವ್ಯಕ್ತವಾಗಿದೆ.


ಸುಮಲತಾ ಅಂಬರೀಶ್ ಮತ್ತು ಅಂಬರೀಶ್‍ ವಿಚಾರದಲ್ಲಿ ಅವರ ಪರವಾಗಿ ಮಾತನಾಡಿದ್ದ ರಾಕ್ ಲೈನ್, ಕುಮಾರಸ್ವಾಮಿ ಮತ್ತು ಕೆಲವು ಜೆಡಿಎಸ್ ನಾಯಕರ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದರು. ಅಂಬಿ ಸಾವಿನ ಸಂದರ್ಭದಲ್ಲಿ ನಡೆದ ಘಟನೆಗಳು, ಸಮಾಧಿ ವಿಚಾರದಲ್ಲಾದ ಅವಮಾನಗಳ ಬಗ್ಗೆ ಮಾಧ್ಯಮಗಳ ಮುಂದೆ ಹೇಳಿದ್ದಲ್ಲದೆ, ನನ್ನ ಮತ್ತು ಸುಮಲತಾರನ್ನು ಸಿಕ್ಕಿಹಾಕಿಸಲು ಜೆಡಿಎಸ್ ನಾಯಕರು ಹುನ್ನಾರ ನಡೆಸಿದ್ದರು ಎಂದು ರಾಕ್ ಲೈನ್ ನಿನ್ನೆ ಮಾಧ್ಯಮಗಳ ಮುಂದೆ ಆರೋಪ ಮಾಡಿದ್ದರು.

ಕುಮಾರಣ್ಣನ ಬಗ್ಗೆ ಮಾತಾಡಕ್ಕೆ ಇವನು ಯಾರು? ಇವನಿಗೂ ಮಂಡ್ಯಕ್ಕೂ ಏನು ಸಂಬಂಧ? 420 ರಾಕ್ ಲೈನ್ ಗೆ ಧಿಕ್ಕಾರ ಎಂದು ರಾಕ್ ಲೈನ್ ನಿವಾಸಕ್ಕೆ ಮುತ್ತಿಗೆ ಹಾಕಿದ ಜೆಡಿಎಸ್ ಬೆಂಬಲಿಗರು ರಾಕ್ ಲೈನ್ ವಿರುದ್ಧ ಪ್ರತಿಭಟನೆ ವೇಳ ಆಕ್ರೋಶ ಹೊರ ಹಾಕಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

Exclusive:ಜೊತೆ ಜೊತೆಯಲಿ ಧಾರವಾಹಿಗೆ ಗುಡ್ ಬೈ ಹೇಳಿದ ಮೇಘಾ ಶೆಟ್ಟಿ!