Select Your Language

Notifications

webdunia
webdunia
webdunia
webdunia

ಮತ್ತೆ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ ಎಚ್ ಡಿಕೆ?

ಮತ್ತೆ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ ಎಚ್ ಡಿಕೆ?
ಬೆಂಗಳೂರು , ಭಾನುವಾರ, 15 ಆಗಸ್ಟ್ 2021 (09:44 IST)
ಬೆಂಗಳೂರು: ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಮತ್ತೆ ಸಿನಿಮಾವೊಂದನ್ನು ನಿರ್ಮಾಣ ಮಾಡಲಿದ್ದಾರೆ ಎಂಬ ಸುದ್ದಿ ಹರಡಿದೆ.


ಕುಮಾರಸ್ವಾಮಿ ಆರಂಭದಲ್ಲಿ ನಿರ್ಮಾಪಕರಾಗಿ ಸಾಕಷ್ಟು ಹಿಟ್ ಚಿತ್ರಗಳನ್ನು ಕೊಟ್ಟವರು. ಇದೀಗ ನಿರ್ದೇಶಕ ಎಸ್. ನಾರಾಯಣ್ ಸಾರಥ್ಯದ ವ್ಯಾಸರಾಯ ಬಲ್ಲಾಳ ವಿರಚಿತ ‘ಹೆಜ್ಜೆ’ ಕಾದಂಬರಿ ಆಧಾರಿತ ಸಿನಿಮಾಗೆ ಬಂಡವಾಳ ಹೂಡಲಿದ್ದಾರೆ ಎಂಬ ಸುದ್ದಿ ಬಂದಿದೆ.

ಸ್ವಾತಂತ್ರ್ಯ ಪೂರ್ವ ಜೀವನದ ಕತೆಯಾಧರಿತ ಸಿನಿಮಾ ಇದಾಗಿದ್ದು, ಈ ಸಿನಿಮಾವನ್ನು ಎಸ್. ನಾರಾಯಣ್ ನಿರ್ದೇಶಿಸಲಿದ್ದು, ಪಾತ್ರವರ್ಗದ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ. ಈ ಮೊದಲು ಎಚ್ ಡಿಕೆ-ಎಸ್. ನಾರಾಯಣ್ ಕಾಂಬಿನೇಷನ್ ನಲ್ಲಿ ‘ಸೂರ್ಯವಂಶ’ದಂತಹ ಹಿಟ್ ಸಿನಿಮಾಗಳು ಬಂದಿವೆ. ಇದೀಗ ಮತ್ತೆ ಇಬ್ಬರೂ ಒಂದಾಗಿ ಸಿನಿಮಾ ಮಾಡಲು ಹೊರಟಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗಿಂದು ಸ್ಪೆಷಲ್ ಡೇ