Select Your Language

Notifications

webdunia
webdunia
webdunia
webdunia

ಪುನೀತ್ ‘ಯುವರತ್ನ’ ಮರುಬಿಡುಗಡೆಗೆ ಫ್ಯಾನ್ಸ್ ಒತ್ತಾಯ

ಪುನೀತ್ ‘ಯುವರತ್ನ’ ಮರುಬಿಡುಗಡೆಗೆ ಫ್ಯಾನ್ಸ್ ಒತ್ತಾಯ
ಬೆಂಗಳೂರು , ಗುರುವಾರ, 11 ನವೆಂಬರ್ 2021 (09:01 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇನ್ನಿಲ್ಲವೆಂಬುದನ್ನು ಅರಗಿಸಿಕೊಳ್ಳಲು ಅಭಿಮಾನಿಗಳಿಗೆ ಕಷ್ಟವಾಗುತ್ತಿದೆ. ಅವರನ್ನು ಮತ್ತೆ ತೆರೆ ಮೇಲೆ ನೋಡದೇ ಆಗಲ್ಲ ಎನ್ನುವ ವಿಚಾರವೇ ಎಲ್ಲರಿಗೂ ನೋವು ತಂದಿದೆ.

ಹೀಗಿರುವಾಗ ಪುನೀತ್ ಅಭಿನಯಿಸಿ ಬಿಡುಗಡೆಯಾಗಿದ್ದ ಕೊನೆಯ ಚಿತ್ರ ‘ಯುವರತ್ನ’ ಸಿನಿಮಾವನ್ನು ಮತ್ತೆ ಬಿಡುಗಡೆ ಮಾಡಬೇಕು ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಒತ್ತಾಯಿಸುತ್ತಿದ್ದಾರೆ.

ಯುವರತ್ನ ಸಿನಿಮಾದಲ್ಲಿ ಒಂದೊಳ್ಳೆಯ ಸಂದೇಶವಿದೆ. ಈ ಸಿನಿಮಾವನ್ನು ಮರುಬಿಡುಗಡೆ ಮಾಡಬೇಕು ಎಂದು ಅಭಿಮಾನಿಗಳು ಆಗ್ರಹಿಸುತ್ತಿದ್ದಾರೆ. ಈ ಸಿನಿಮಾವನ್ನು ಮತ್ತೆ ಹೊಸ ಸಿನಿಮಾದಂತೇ ರಾಜ್ಯಾದ್ಯಂತ ಬಿಡುಗಡೆ ಮಾಡಬೇಕು ಎಂಬುದು ಅಭಿಮಾನಿಗಳ ಆಗ್ರಹ.

Share this Story:

Follow Webdunia kannada

ಮುಂದಿನ ಸುದ್ದಿ

ಪುನೀತ್ ಅಂತಿಮ ದರ್ಶನ ಪಡೆಯಲಿಲ್ಲವೇ ರಾಧಿಕಾ ಪಂಡಿತ್? ಅಸಲಿ ಸತ್ಯ ಬಹಿರಂಗಪಡಿಸಿದ ನಟಿ