Select Your Language

Notifications

webdunia
webdunia
webdunia
webdunia

ಕನ್ನಡಕ್ಕೆ ಹೊಸ ವಿಲನ್ ಪರಿಚಯಸಲಿದ್ದಾರೆ ದುನಿಯಾ ವಿಜಯ್

ಕನ್ನಡಕ್ಕೆ ಹೊಸ ವಿಲನ್ ಪರಿಚಯಸಲಿದ್ದಾರೆ ದುನಿಯಾ ವಿಜಯ್
ಬೆಂಗಳೂರು , ಬುಧವಾರ, 13 ಏಪ್ರಿಲ್ 2022 (09:39 IST)
ಬೆಂಗಳೂರು: ಸಲಗ ಯಶಸ್ಸಿನ ಬಳಿಕ ಭೀಮ ಸಿನಿಮಾ ನಿರ್ದೇಶಿಸಿ ನಟಿಸಲು ಹೊರಟಿರುವ ದುನಿಯಾ ವಿಜಯ್ ಕನ್ನಡಕ್ಕೆ ಹೊಸ ಖಳನಾಯಕನನ್ನು ಪರಿಚಯಿಸಲು ಹೊರಟಿದ್ದಾರೆ.

ಭೀಮ ಸಿನಿಮಾದ ಫಸ್ಟ್ ಲುಕ್ ಈಗಾಗಲೇ ಬಿಡುಗಡೆಯಾಗಿತ್ತು. ಇದೀಗ ಪಾತ್ರವರ್ಗದ ಆಯ್ಕೆ ನಡೆಯುತ್ತಿದೆ. ಈ ಸಿನಿಮಾಗಾಗಿ ವಿಜಿ ಖಳನಾಯಕನಿಗಾಗಿ ಸುಮಾರು 50 ಜನರನ್ನು ಆಡಿಷನ್ ಮಾಡಿದ್ದಾರೆ. ಅಂತಿಮವಾಗಿ ಡ್ರ್ಯಾಗನ್ ಮಂಜು ಎಂಬವರನ್ನು ತೆರೆಗೆ ತರುತ್ತಿದ್ದಾರೆ. ಅಂತಾರಾಷ್ಟ್ರೀಯ ಬಾಡಿ ಬಿಲ್ಡರ್ ಆಗಿರುವ ಮಂಜು ಈಗ ಸದ್ಯಕ್ಕೆ ನಟನೆಗಾಗಿ ತರಬೇತಿ ಪಡೆಯುತ್ತಿದ್ದಾರಂತೆ.

ಸದ್ಯಕ್ಕೆ ತೆಲುಗು ಸಿನಿಮಾದ ಚಿತ್ರೀಕರಣದಲ್ಲಿರುವ ವಿಜಿ ಇದರ ಜೊತೆಗೇ ಭೀಮ ಸಿನಿಮಾದ ತಯಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

‘ಬೀಸ್ಟ್’ ನಲ್ಲಿ ವೀರರಾಘವನ್ ಆಗಿ ಮಿಂಚಿದ ವಿಜಯ್