Select Your Language

Notifications

webdunia
webdunia
webdunia
webdunia

ಪುಣ್ಯಸ್ಮರಣೆ ದಿನ ಒಂದೊಳ್ಳೆ ಕೆಲಸ ಮಾಡಿದ ಸಾಹಸಸಿಂಹ ವಿಷ್ಣುವರ್ಧನ್ ಕುಟುಂಬ

ಪುಣ್ಯಸ್ಮರಣೆ ದಿನ ಒಂದೊಳ್ಳೆ ಕೆಲಸ ಮಾಡಿದ ಸಾಹಸಸಿಂಹ ವಿಷ್ಣುವರ್ಧನ್ ಕುಟುಂಬ
ಮೈಸೂರು , ಗುರುವಾರ, 30 ಡಿಸೆಂಬರ್ 2021 (17:13 IST)
ಮೈಸೂರು: ಇಂದು ಕನ್ನಡಿಗರ ಪ್ರೀತಿಯ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅಗಲಿ 12 ವರ್ಷ ಕಳೆದಿದೆ. ಅವರ ಪುಣ್ಯಸ್ಮರಣೆ ಕಾರ್ಯವನ್ನು ವಿಷ್ಣು ಕುಟುಂಬ ಮೈಸೂರಿನಲ್ಲಿರುವ ಸ್ಮಾರಕ ಸ್ಥಳದಲ್ಲಿ ಆಚರಿಸಿದೆ.

ಈ ವೇಳೆ ಮಾತನಾಡಿರುವ ಭಾರತಿ ವಿಷ್ಣುವರ್ಧನ್, ಕೊವಿಡ್ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಸ್ಮಾರಕ ಕೆಲಸ ಸರಿಯಾಗಿ ಆಗಲಿಲ್ಲ. ಮುಂದಿನ ವರ್ಷ ಸ್ಮಾರಕ ನಿರ್ಮಾಣವಾಗಬಹುದು ಎಂದು ಆಶಿಸಿದ್ದಾರೆ.

ಈ ಪುಣ್ಯಸ್ಮರಣೆ ಸಂದರ್ಭದಲ್ಲಿ ಭಾರತಿ ವಿಷ್ಣುವರ್ಧನ್ ಹಾಗೂ ಅಳಿಯ ಅನಿರುದ್ಧ್ ಬಡ ಮಕ್ಕಳಿಗೆ ಪುಸ್ತಕ ವಿತರಿಸಿ ಸಮಾಜಮುಖೀ ಕೆಲಸ ಮಾಡಿದರು. ವಿಷ್ಣುವರ್ಧನ್ ಜೊತೆಗೆ ಇತ್ತೀಚೆಗೆ ಅಗಲಿದ ಹಿರಿಯ ನಟ ಶಿವರಾಂ ಅವರಿಗೂ ಗೌರವ ಸಲ್ಲಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಪುನೀತ್ ಸಮಾಧಿ ನೋಡಲು ಅಮೆರಿಕಾದಿಂದ ಬಂದ ಮಹಿಳೆ