Select Your Language

Notifications

webdunia
webdunia
webdunia
webdunia

ಜೈಲಿನಿಂದ ಹೊರಬಂದ ಮೇಲೆ ದರ್ಶನ್ ಹೀಗಿರಲ್ಲ: ಅದಕ್ಕೆ ಕಾರಣ ಮಗ ವಿನೀಶ್ ಬುದ್ಧಿವಾದ

Darshan-Vineesh Darshan

Krishnaveni K

ಬೆಂಗಳೂರು , ಶುಕ್ರವಾರ, 19 ಜುಲೈ 2024 (09:46 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಬಿಡುಗಡೆಯಾದ ಬಳಿಕ ಹೇಗಿರಬಹುದು ಎಂಬ ಕುತೂಹಲ ಎಲ್ಲರಿಗೂ ಇದೆ. ಅವರು ಬಿಡುಗಡೆಯಾದ ಮೇಲೆ ಹೀಗಂತೂ ಇರಲ್ಲ ಎನ್ನುತ್ತಿವೆ ಮೂಲಗಳು. ಇದಕ್ಕೆ ಕಾರಣ ಮಗ ವಿನೀಶ್ ಗೆ ಮಾಡಿರುವ ಪ್ರಾಮಿಸ್.

ಜೈಲಿನಲ್ಲಿರುವ ತಂದೆಯನ್ನು ನೋಡಲು ವಿನೀಶ್ ಆಗಾಗ ಜೈಲಿಗೆ ಭೇಟಿ ನೀಡುತ್ತಿರುತ್ತಾರೆ. ಅಪ್ಪನೆಂದರೆ ವಿನೀಶ್ ಗೆ ತುಂಬಾ ಇಷ್ಟ. ಆದರೆ ಈ ಸ್ಥಿತಿಯಲ್ಲಿ ತನ್ನ ತಂದೆಯನ್ನು ನೋಡಲು ಆತನಿಗೂ ಸಾಧ್ಯವಾಗುತ್ತಿಲ್ಲ. ಪವಿತ್ರಾ ಗೌಡಗೆ ಉಪಕಾರ ಮಾಡಲು ಹೋಗಿ ತಂದೆ ಜೈಲು ಸೇರಿರುವುದು ವಿನೀಶ್ ಕಂಗೆಡಿಸಿದೆ.

ಇತ್ತೀಚೆಗೆ ಜೈಲಿಗೆ ಭೇಟಿ ನೀಡಿದ್ದಾಗ ತಲೆಕೂದಲನ್ನೂ ಶೇವ್ ಮಾಡಿಕೊಂಡಿರುವ ತಂದೆಯನ್ನು ನೋಡಿ ವಿನೀಶ್ ತುಂಬಾ ಬೇಸರಪಟ್ಟುಕೊಂಡಿದ್ದಾನಂತೆ. ರಾಜನಂತೆ ಜನಗಳ ಮಧ್ಯೆ ಓಡಾಡುತ್ತಿದ್ದ ತಂದೆ ಈಗ ಜೈಲಿನಲ್ಲಿ ನಾಲ್ಕು ಗೋಡೆಯ ಮಧ್ಯೆ ಬಂಧಿಯಾಗಿರುವುದನ್ನು ಅವನಿಗೆ ನೋಡಲು ಸಾಧ್ಯವಾಗುತ್ತಿಲ್ಲ.

ಇದೇ ಕಾರಣಕ್ಕೆ ಅಪ್ಪಾ ನೀವು ಹೊರಗೆ ಬಂದ ಮೇಲೆ ಈಗ ಇರುವ ಯಾರ ಸಹಸವಾಸವೂ ಇಟ್ಟುಕೊಳ್ಳಬೇಡಿ. ಇವರು ಯಾರೂ ಸರಿಯಿಲ್ಲ ಎಂದು ತಂದೆಗೆ ಬುದ್ಧಿಮಾತು ಹೇಳಿದ್ದಾನೆ. ಮಗನ ಮಾತಿಗೆ ದರ್ಶನ್ ಕೂಡಾ ಭಾವುಕರಾಗಿ ಒಪ್ಪಿಕೊಂಡಿದ್ದಾರಂತೆ. ಹೀಗಾಗಿ ದರ್ಶನ್ ಒಂದು ವೇಳೆ ಜೈಲಿನಿಂದ ಹೊರಬಂದರೆ ಅವರು ಖಂಡಿತಾ ಬದಲಾಗುತ್ತಾರೆ ಎಂಬುದು ಎಲ್ಲರ ನಂಬಿಕೆಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟ ದರ್ಶನ್ ರನ್ನು ಹತಾಶೆಗೆ ದೂಡಿದ ಕೋರ್ಟ್ ನಿರ್ಧಾರ