Select Your Language

Notifications

webdunia
webdunia
webdunia
webdunia

ದರ್ಶನ್ ಸೇವ್ ಮಾಡಲು ಡಿಕೆ ಶಿವಕುಮಾರ್ ಜೊತೆ ನಡೆದಿದೆಯಾ ರಹಸ್ಯ ಮಾತುಕತೆ

DK Shivakumar

Krishnaveni K

ಬೆಂಗಳೂರು , ಗುರುವಾರ, 25 ಜುಲೈ 2024 (09:30 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ರನ್ನು ಕಾಪಾಡಲು ನಿನ್ನೆ ವಿಜಯಲಕ್ಷ್ಮಿ ದರ್ಶನ್ ಡಿಸಿಎಂ ಡಿಕೆ ಶಿವಕುಮಾರ್ ಭೇಟಿ ವೇಳೆ ರಹಸ್ಯ ಮಾತುಕತೆ ನಡೆಸಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ವಿಜಯಲಕ್ಷ್ಮಿ ದರ್ಶನ್, ದಿನಕರ್ ತೂಗುದೀಪ ಮತ್ತು ನಿರ್ದೇಶಕ ಪ್ರೇಮ್ ನಿನ್ನೆ ಡಿಕೆ ಶಿವಕುಮಾರ್ ರನ್ನು ಅವರ ನಿವಾಸದಲ್ಲಿ ಭೇಟಿಯಾಗಿದ್ದರು. ದರ್ಶನ್ ಪುತ್ರ ವಿನೀಶ್ ಶಾಲೆ ಅಡ್ಮಿಷನ್ ವಿಚಾರವಾಗಿ ಭೇಟಿಯಾಗಿದ್ದಾಗಿ ನಿರ್ದೇಶಕ ಪ್ರೇಮ್ ನೆಪ ಹೇಳಿದ್ದರು.

ಇನ್ನು ಡಿಕೆ ಶಿವಕುಮಾರ್ ಕೂಡಾ ಮಾಧ್ಯಮಗಳ ಜೊತೆ ಮಾತನಾಡುವಾಗ ನಾನು ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ಆಗಲ್ಲ ಎಂದು ಹೇಳಿದ್ದೇನೆ. ಕಾನೂನಿ ರೀತಿಯಲ್ಲೇ ಎಲ್ಲವೂ ನಡೆಯಲಿದೆ. ಮಗನ ಅಡ್ಮಿಷನ್ ಗೆ ಸಹಾಯ ಮಾಡಬೇಕು ಎಂದರು. ಅದನ್ನು ನಾನು ಪ್ರಿನ್ಸಿಪಾಲ್ ಜೊತೆ ಮಾತನಾಡಿ ಬಗೆಹರಿಸುತ್ತೇನೆ ಎಂದಿದ್ದರು.

ಆದರೆ ಇಲ್ಲಿ ಕೇವಲ ಮಗನ ಅಡ್ಮಿಷನ್ ವಿಚಾರ ಮಾತ್ರವಲ್ಲ, ದರ್ಶನ್ ರನ್ನು ಕಾಪಾಡುವ ಕುರಿತೂ ಮಾತುಕತೆ ನಡೆಸಲಾಗಿದೆ ಎನ್ನಲಾಗುತ್ತಿದೆ. ದರ್ಶನ್ ವಿಚಾರಣೆ ವೇಳೆ ನಾನು ಹೊಡೆದಿಲ್ಲ ಎಂದು ಹೇಳಿರುವುದಾಗಿ ವಿಜಯಲಕ್ಷ್ಮಿ ಡಿಸಿಎಂಗೆ ಮನವರಿಕೆ ಮಾಡಿದ್ದಾರೆ. ಹೀಗಾಗಿ ಕಾನೂನು ರೀತಿಯಲ್ಲಿ ದರ್ಶನ್ ರನ್ನು ಸೇವ್ ಮಾಡಲು ಸಹಾಯ ಮಾಡಿ ಎಂದಿದ್ದಾರಂತೆ.

ಅದಲ್ಲದೆ, ರೇಣುಕಾಸ್ವಾಮಿ ಕುಟುಂಬಕ್ಕೂ ಸಹಾಯ ಮಾಡುವ ಬಗ್ಗೆ ಮಾತುಕತೆ ನಡೆಸಿರಬಹುದು ಎಂಬ ಮಾತು ಕೇಳಿಬರುತ್ತಿದೆ. ಕೇವಲ ಮಗನ ಅಡ್ಮಿಷನ್ ಗಾಗಿ ವಿಜಯಲಕ್ಷ್ಮಿ, ಪ್ರೇಮ್ ಮತ್ತು ದಿನಕರ್ ಡಿಸಿಎಂರನ್ನು ಮನೆಗೆ ಬಂದು ಭೇಟಿ ಮಾಡಿ ಅಷ್ಟು ಹೊತ್ತು ಮಾತುಕತೆ ನಡೆಸುವ ಅಗತ್ಯವಿತ್ತೇ ಎಂಬ ಪ್ರಶ್ನೆ ಮೂಡುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಭಿಮಾನಿಗೆ ವಿಐಪಿ ಸೆಲ್‌ನಲ್ಲಿ ದೇವರಂತೆ ಕಂಡ ದರ್ಶನ್