Select Your Language

Notifications

webdunia
webdunia
webdunia
webdunia

ಜೈಲೂಟದಿಂದ ದರ್ಶನ್ ತೂಕ ಇಳಿಕೆ: ಭೇಟಿಗೆ ಬಂದ ಪತ್ನಿ ವಿಜಯಲಕ್ಷ್ಮೀ ತಂದಿದ್ದೇನು

ಜೈಲೂಟದಿಂದ ದರ್ಶನ್ ತೂಕ ಇಳಿಕೆ: ಭೇಟಿಗೆ ಬಂದ ಪತ್ನಿ ವಿಜಯಲಕ್ಷ್ಮೀ ತಂದಿದ್ದೇನು

Sampriya

ಬೆಂಗಳೂರು , ಬುಧವಾರ, 10 ಜುಲೈ 2024 (17:03 IST)
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರನ್ನು ಭೇಟಿಯಾಗಲು ಪತ್ನಿ ವಿಜಯಲಕ್ಷ್ಮೀ, ಮಗ ವಿನೀಶ್ ಹಾಗೂ ಅಕ್ಕನ ಮಗ ಚಂದನ್ ಅವರು ಇಂದು ಪರಪ್ಪನ ಅಗ್ರಹಾರಕ್ಕೆ ಬಂದಿದ್ದಾರೆ.

ದರ್ಶನ್ ಜೈಲು ಸೇರಿದ ನಂತರ ಪತ್ನಿ ವಿಜಯಲಕ್ಷ್ಮೀ ಅವರು ಪತಿಯನ್ನು ಭೇಟಿಯಾಗಲು ಮೂರು ಬಾರಿ ಬಂದಿದ್ದಾರೆ.  ಈ ಪ್ರಕರಣದಿಂದ ಪತಿಯನ್ನು ಹೊರತರಲು ವಿಜಯಲಕ್ಷ್ಮೀ ಅವರು ಕಾನೂನಿನ ಮೂಲಕ ಪ್ರಯತ್ನ ಮಾಡುತ್ತಿದ್ದಾರೆ. ಇನ್ನೂ ದರ್ಶನ್‌ ಅವರಿಗೆ ಈ ಪ್ರಕರಣದಿಂದ ಮುಕ್ತಿ ನೀಡುವಂತೆ ವಿಜಯಲಕ್ಷ್ಮೀ ಅವರು ಈಚೆಗೆ ಪವರ್ ಫುಲ್ ದೇವಸ್ಥಾನಕ್ಕೆ ಹೋಗಿ ಬೇಡಿಕೊಂಡಿದ್ದರು ಎಂಬ ಮಾಹಿತಿಯಿದೆ.

ಇನ್ನೂ ಪತಿಯನ್ನು ನೋಡಲು ಬಂದ ವಿಜಯಲಕ್ಷ್ಮೀ ಅವರು ಬೆಡ್ ಶೀಟ್, ಬಟ್ಟೆಯ ಜತೆ ಡ್ರೈ ಪ್ರೂಟ್ಸ್, ಸ್ನಾಕ್ಸ್‌ ಹಣ್ಣುಗಳನ್ನು ತಂದಿದ್ದರು. ಆದರೆ ಜೈಲಿನ ಒಳಗೆ ಹಣ್ಣುಗಳನ್ನಷ್ಟೇ ತೆಗೆದುಕೊಂಡು ಹೋಗಲು ಅವಕಾಶ ಎಂದಿದ್ದಾರೆ. ಇನ್ನೂ ದರ್ಶನ್ ಜತೆಗೆ ವಿಜಯಲಕ್ಷ್ಮೀ, ಮಗ ವಿನೀಶ್ ಮತ್ತು ಅಕ್ಕನ ಮಗ ಕೆಲ ಹೊತ್ತು ಮಾತುಕತೆ ನಡೆಸಿದ್ದಾರೆ.

ಇನ್ನೂ ಪತ್ನಿ ವಿಜಯಲಕ್ಷ್ಮೀ ಅವರು ಈ ವೇಳೆ ಪತಿಗೆ ದೈರ್ಯ ತುಂಬಿದ್ದಾರೆ. ಕಾನೂನಿನ ಪ್ರಕಾರ ಏನು ಮಾಡಬೇಕೆಂಬ ಚರ್ಚೆ ಮಾಡಿದ್ದಾರೆಂಬ ಮಾಹಿತಿಯಿದೆ.

ಇನ್ನೂ ಈಚೆಗೆ ದರ್ಶನ್ ಅವರು ಜೈಲಿನ ಊಟ ಸರಿಹೋಗುತ್ತಿಲ್ಲ ಮನೆ ಊಟ ನೀಡುವಂತೆ ಕೋರ್ಟ್ ಮೊರೆ ಹೋಗಿದ್ದರು.  ಅದರ ಜತೆಗೆ ಹಾಸಿಗೆ, ಓದಲು ಪುಸ್ತಕ ನೀಡುವಂತೆ ಕೋರಿ ನಟ ದರ್ಶನ್ ಕೋರ್ಟ್​ಗೆ ಮನವಿ ಮಾಡಿದ್ದರು. ಬುಧವಾರ ಅರ್ಜಿಯ ವಿಚಾರಣೆ ನಡೆಯಿತು. ವಕೀಲರ ವಾದ ಆಲಿಸಿದ ಕೋರ್ಟ್ ಜುಲೈ 18ಕ್ಕೆ ಅರ್ಜಿಯ ವಿಚಾರಣೆಯನ್ನು ಮುಂದೂಡಿತು. ಆದ್ದರಿಂದ ಜುಲೈ 18ರ ತನಕ ದರ್ಶನ್ ಜೈಲು ಊಟವನ್ನೇ ಮಾಡಬೇಕಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಚಂದನವನದಲ್ಲಿ ಹೊಸ ಭರವಸೆಯಲ್ಲಿ ದೇವರಾಜ್ ಕಿರಿಯ ಪುತ್ರ ಪ್ರಣಂ