Select Your Language

Notifications

webdunia
webdunia
webdunia
webdunia

ನಿರ್ಮಾಪಕ ಸೌಂದರ್ಯ ಜಗದೀಶ್ ಸಾವಿಗೆ ಪವಿತ್ರಾ ಗೌಡ, ದರ್ಶನ್ ಲಿಂಕ್

Darshan-Soundarya Jagadeesh

Krishnaveni K

ಬೆಂಗಳೂರು , ಸೋಮವಾರ, 24 ಜೂನ್ 2024 (14:25 IST)
ಬೆಂಗಳೂರು: ಇತ್ತೀಚೆಗಷ್ಟೇ ಆತ್ಮಹತ್ಯೆಗೆ ಶರಣಾಗಿದ್ದ ಸ್ಯಾಂಡಲ್ ವುಡ್ ನಿರ್ಮಾಪಕ ಸೌಂದರ್ಯ ಜಗದೀಶ್ ಸಾವಿಗೆ ಈಗ ಪವಿತ್ರಾ ಗೌಡ, ದರ್ಶನ್ ಹೆಸರು ಲಿಂಕ್ ಮಾಡಲಾಗುತ್ತಿದೆ.

ಸೌಂದರ್ಯ ಜಗದೀಶ್ ಹಣಕಾಸಿನ ವ್ಯವಹಾರದಲ್ಲಿ ವಂಚನೆಯಾಗಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಗ್ಗೆ ಅವರು ಡೆತ್ ಕೂಡಾ ಬರೆದಿಟ್ಟಿದ್ದರು. ಪಾಲುದಾರರೇ ನನಗೆ ಸುಮಾರು 60 ಕೋಟಿ ರೂ. ಬಾಕಿ ಪಾವತಿಸದೇ ನನಗೆ ವಂಚನೆ ಮಾಡಿದ್ದಾರೆ ಎಂದು ಸೌಂದರ್ಯ ಜಗದೀಶ್ ಡೆತ್ ನೋಟ್ ನಲ್ಲಿ ಬರೆಯಲಾಗಿತ್ತು.

ಇದೀಗ ಇದೇ ಪ್ರಕರಣಕ್ಕೆ ದರ್ಶನ್ ಮತ್ತು ಪವಿತ್ರಾ ಗೌಡ ಹೆಸರು ಥಳುಕು ಹಾಕಲಾಗಿದೆ. ಸೌಂದರ್ಯ ಜಗದೀಶ್ ಆಪ್ತರಲ್ಲಿ ದರ್ಶನ್ ಕೂಡಾ ಒಬ್ಬರಾಗಿದ್ದರು. ಅವರು ತೀರಿಕೊಂಡಾಗ ಅಂತಿಮ ದರ್ಶನಕ್ಕೆ ಬಂದಿದ್ದ ದರ್ಶನ್ ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದರು. ಆದರೆ ಈಗ ಈ ಸಾವಿನಲ್ಲಿ ದರ್ಶನ್-ಪವಿತ್ರಾ ಗೌಡ ಹೆಸರನ್ನು ಯಾರೋ ಹರಿಯಬಿಟ್ಟಿದ್ದಾರೆ.

ಪವಿತ್ರಾ ಗೌಡಗೆ ಹೊಸ ಮನೆ ಖರೀದಿ ಮಾಡಲು ಸೌಂದರ್ಯ ಜಗದೀಶ್ 2 ಕೋಟಿ ರೂ. ನೀಡಿದ್ದರು. ದರ್ಶನ್ ಒತ್ತಡಕ್ಕೆ ಮಣಿದು ಸೌಂದರ್ಯ ಜಗದೀಶ್ ಹಣ ನೀಡಿದ್ದರು. ಆದರೆ ಈವರೆಗೆ ಆ ಹಣ ವಾಪಸ್ ನೀಡಿರಲಿಲ್ಲ ಎಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ. ಆ ಮೂಲಕ ಸೌಂದರ್ಯ ಜಗದೀಶ್ ಸಾವಿಗೂ ದರ್ಶನ್, ಪವಿತ್ರಾ ಹೆಸರು ಲಿಂಕ್ ಮಾಡಲಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪತಿ ದರ್ಶನ್ ನೋಡಲು ಬಂದು ಅರ್ಧಕ್ಕೇ ವಾಪಸ್ ಆದ ವಿಜಯಲಕ್ಷ್ಮಿ