Select Your Language

Notifications

webdunia
webdunia
webdunia
webdunia

ರಾತ್ರಿಯಾದರೆ ಸೊಳ್ಳೆಕಾಟ, ಉಪ್ಪು,ಖಾರವಿಲ್ಲದ ಊಟ: ನಟ ದರ್ಶನ್, ಗೆಳತಿ ಪವಿತ್ರಾ ಗೌಡಗೆ ಜೈಲಿನಲ್ಲಿ ನರಕದರ್ಶನ

Darshan

Krishnaveni K

ಬೆಂಗಳೂರು , ಸೋಮವಾರ, 24 ಜೂನ್ 2024 (10:55 IST)
Photo Credit: Instagram
ಬೆಂಗಳೂರು: ಇಷ್ಟು ದಿನ ಐಷಾರಾಮಿ ಜೀವನ ನಡೆಸುತ್ತಿದ್ದ ನಟ ದರ್ಶನ್ ಮತ್ತು ಗೆಳತಿ ಪವಿತ್ರಾ ಗೌಡಗೆ ಈಗ ಜೈಲಿನಲ್ಲಿ ಅಕ್ಷರಶಃ ನರಕದರ್ಶನವಾಗುತ್ತಿದೆ. ಜೈಲಿನ ಜೀವನಕ್ಕೆ ಹೊಂದಿಕೊಳ್ಳಲಾಗದೇ ಪರದಾಡುತ್ತಿದ್ದಾರೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್, ಪವಿತ್ರಾಗೌಡ ಸೇರಿದಂತೆ ಎಲ್ಲಾ ಆರೋಪಿಗಳನ್ನೂ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ. ದರ್ಶನ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಶನಿವಾರದಂದು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿತ್ತು. ಜುಲೈ 4 ರವರೆಗೆ ಇವರ ನ್ಯಾಯಾಂಗ ಬಂಧನವಿರಲಿದೆ.

ಜೈಲಿಗೆ ಹೋದ ದಿನದಿಂದಲೂ ದರ್ಶನ್ ಮಂಕಾಗಿ ಕುಳಿತಿದ್ದಾರೆ. ಜೈಲಿನ ಊಟ ಸೇರದೇ ಪರದಾಡುತ್ತಿದ್ದಾರೆ. ಎರಡನೇ ದಿನವಾದ ನಿನ್ನೆ ಕೇವಲ ಚಪಾತಿ, ಮಜ್ಜಿಗೆ ಸೇವಿಸಿದ್ದಾರೆ. ಪ್ರತಿನಿತ್ಯ ಮಾಂಸದೂಟ ಮಾಡುತ್ತಿದ್ದ ದರ್ಶನ್ ಗೆ ಈಗ ಜೈಲಿನ ನಿಯಮಿತ ಊಟ ಸೇರುತ್ತಿಲ್ಲವಂತೆ.

ಇತ್ತ ಪವಿತ್ರಾ ಗೌಡ ಕತೆಯೂ ಇದೇ ಆಗಿದೆ. ಐಷಾರಾಮಿ ಜೀವನಕ್ಕೆ ಒಗ್ಗಿಹೋಗಿದ್ದ ಪವಿತ್ರಾಗೆ ಜೈಲಿನಲ್ಲಿ ಉಪ್ಪು-ಖಾರವಿಲ್ಲದ ಊಟ ಸೇರುತ್ತಿಲ್ಲ. ಜೊತೆಗೆ ಜೈಲು ಕೊಠಡಿಯಲ್ಲಿ ಬರಿಯ ಚಾಪೆ, ಬೆಡ್ ಶೀಟ್ ನೀಡಲಾಗಿದೆ. ಸೊಳ್ಳೆ ಕಾಟದಿಂದ ನಿದ್ರೆಯೂ ಮಾಡಲಾಗದೇ ಪರದಾಡುತ್ತಿದ್ದಾರೆ. ರಾತ್ರಿಯಿಡೀ ನಿದ್ರೆ ಮಾಡಲಾಗದೇ ಪದೇ ಪದೇ ಎದ್ದು ಕೂರುತ್ತಿದ್ದಾರೆ. ತಮಗಾದ ಪರಿಸ್ಥಿತಿಯಿಂದ ಮಂಕಾಗಿ ಸಹ ಕೈದಿಗಳ ಜೊತೆಗೂ ಬೆರೆಯುತ್ತಿಲ್ಲ ಎಂದು ತಿಳಿದುಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಕಲಾಂಗ ಅಭಿಮಾನಿಯ ತಳ್ಳಿದ ಬಾಡಿ ಗಾರ್ಡ್: ಕ್ಷಮೆ ಕೇಳಿದ ನಟ ನಾಗಾರ್ಜುನ