Select Your Language

Notifications

webdunia
webdunia
webdunia
webdunia

ಜೈಲಿನಲ್ಲೇ ಹೇಗಿರುತ್ತೆ ದರ್ಶನ್ ಗಣೇಶೋತ್ಸವ ಆಚರಣೆ

Darshan

Krishnaveni K

ಬಳ್ಳಾರಿ , ಶನಿವಾರ, 7 ಸೆಪ್ಟಂಬರ್ 2024 (12:45 IST)
ಬಳ್ಳಾರಿ: ಪ್ರತೀ ಬಾರಿ ಅದ್ಧೂರಿಯಾಗಿ ಗಣೇಶ ಹಬ್ಬ ಮಾಡಿಕೊಳ್ಳುತ್ತಿದ್ದ ನಟ ದರ್ಶನ್ ಗೆ ಈ ಬಾರಿ ಜೈಲಿನಲ್ಲಿ ಗಣೇಶ ಹಬ್ಬ ಆಚರಿಸಬೇಕಾದ ಪರಿಸ್ಥಿತಿ. ಹಬ್ಬ ಆಚರಿಸುವ ಮನಸ್ಥಿತಿಯಲ್ಲೂ ಅವರು ಈಗ ಇಲ್ಲ ಎನ್ನುವುದು ವಾಸ್ತವ.

ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ರನ್ನು ಸಾಮಾನ್ಯ ಖೈದಿಯಂತೆ ಟ್ರೀಟ್ ಮಾಡಲಾಗುತ್ತಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಂತೆ ಇಲ್ಲಿ ವಿಐಪಿ ಟ್ರೀಟ್ ಮೆಂಟ್ ಇಲ್ಲ. ಬದಲಾಗಿ ಜೈಲಿನ ವಿಐಪಿ ಸೆಲ್ ನಲ್ಲಿ ಹೈ ಸೆಕ್ಯುರಿಟಿಯಲ್ಲಿ ದರ್ಶನ್ ರನ್ನು ಇರಿಸಲಾಗಿದೆ.

ಪ್ರತೀ ಬಾರಿಯಂತೆ ಈ ಬಾರಿಯೂ ಬಳ್ಳಾರಿ ಜೈಲಿನಲ್ಲಿ ಗಣೇಶೋತ್ಸವ ನಡೆಯಲಿದೆ. ಹೀಗಾಗಿ ಜೈಲಿನ ಇತರೆ ಖೈದಿಗಳೊಂದಿಗೆ ದರ್ಶನ್ ಕೂಡಾ ಹಬ್ಬದಲ್ಲಿ ಪಾಲ್ಗೊಳ್ಳಲಿದ್ದಾರೆ. ಆದರೆ ಹಾಗಂತ ಹಬ್ಬ ಎಂದು ಸಂಭ್ರಮಪಡುವಂತೇನೂ ಇಲ್ಲ. ಈ ಬಾರಿ ಸರಳವಾಗಿ ಗಣೇಶ ಹಬ್ಬ ಮಾಡಲು ತೀರ್ಮಾನಿಸಲಾಗಿದೆ.

ಪ್ರತೀ ಬಾರಿ ಗಣೇಶ ಹಬ್ಬದ ಸಂದರ್ಭದಲ್ಲಿ ಜೈಲಿನ ಖೈದಿಗಳೂ ತಯಾರಿಯಲ್ಲಿ ಕೈ ಜೋಡಿಸುತ್ತಿದ್ದರು. ಆದರೆ ಈ ಬಾರಿ ಜೈಲಿನ ಸಿಬ್ಬಂದಿಗಳು ಮಾತ್ರ ತಯಾರಿ ಮಾಡಿ ಖೈದಿಗಳಿಗೆ ನಮಸ್ಕಾರ ಮಾಡಲು ಮಾತ್ರ ಅವಕಾಶ ನೀಡಲಾಗುತ್ತಿದೆ. ಹೀಗಾಗಿ ದರ್ಶನ್ ಸರಳವಾಗಿ ಗಣೇಶ ಹಬ್ಬ ಆಚರಿಸಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಲ್ಕ್ ಸ್ಯಾರಿ ಉಟ್ಟು ಸಿದ್ಧಿವಿನಾಯಕನ ಸನ್ನಿಧಿಗೆ ಭೇಟಿ ಕೊಟ್ಟ ದೀಪಿಕಾ ಪಡುಕೋಣೆ