Select Your Language

Notifications

webdunia
webdunia
webdunia
webdunia

ಇಂದೇ ನಟ ದರ್ಶನ್ ಗೆ ಬಿಡುಗಡೆ ಭಾಗ್ಯ: ಸ್ವಾಗತಿಸಲು ಫ್ಯಾನ್ಸ್ ರೆಡಿ

Darshan

Krishnaveni K

ಬೆಂಗಳೂರು , ಮಂಗಳವಾರ, 8 ಅಕ್ಟೋಬರ್ 2024 (11:51 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಗೆ ಇಂದೇ ಜಾಮೀನು ಸಿಕ್ಕಿ ಬಿಡುಗಡೆಯಾಗಲಿದ್ದಾರಾ? ಅವರ ಅಭಿಮಾನಿಗಳಲ್ಲಿ ಡಿಬಾಸ್ ಇಂದೇ ಬಿಡುಗಡೆಯಾಗಲಿದ್ದಾರೆ ಎಂಬ ವಿಶ್ವಾಸವಿದೆ.

ದರ್ಶನ್ ಸದ್ಯಕ್ಕೆ ಬಳ್ಳಾರಿ ಜೈಲಿನಲ್ಲಿದ್ದಾರೆ. ಅವರಿಗೆ ಜಾಮೀನು ಸಿಕ್ಕರೆ ಬಳ್ಳಾರಿಯಿಂದ ಬೆಂಗಳೂರಿಗೆ ಕರೆತರಲು ಹೆಲಿಕಾಪ್ಟರ್ ರೆಡಿಯಾಗಿದೆ ಎನ್ನಲಾಗಿದೆ. ದರ್ಶನ್ ಬಿಡುಗಡೆಯಾದರೆ ಅವರನ್ನು ಸ್ವಾಗತಿಸಲು ಫ್ಯಾನ್ಸ್ ಕೂಡಾ ಸಿದ್ಧರಾಗಿದ್ದಾರೆ. ಜೈಲಿನ ಹೊರಭಾಗದಲ್ಲೇ ಫ್ಯಾನ್ಸ್ ಸಂಭ್ರಮಾಚರಿಸಲಿದ್ದಾರೆ.

ದರ್ಶನ್ ಜಾಮೀನು ಅರ್ಜಿ ವಿಚಾರಣೆ ಕಳೆದ ಕೆಲವು ದಿನಗಳಿಂದ ಕೋರ್ಟ್ ನಲ್ಲಿ ನಡೆಯುತ್ತಿದೆ. ಅದು ಇಂದಿಗೆ ಮತ್ತೆ ಮುಂದೂಡಿಕೆಯಾಗಿದ್ದು ಇಂದು ನ್ಯಾಯಾಧೀಶರು ಯಾವ ತೀರ್ಮಾನಕ್ಕೆ ಬರುತ್ತಾರೆ ಎಂದು ಕಾದುನೋಡಬೇಕಿದೆ. ದರ್ಶನ್ ಪರ ವಕೀಲ ಸಿವಿ ನಾಗೇಶ್ ಈಗಾಗಲೇ ತಮ್ಮ ವಾದ ಮಂಡಿಸಿದ್ದಾರೆ.

ಪೊಲೀಸರು ನೀಡಿದ್ದ ಸಾಕ್ಷ್ಯಗಳೆಲ್ಲವೂ ಕಪೋಲಕಲ್ಪಿತ ಎಂದು ಪ್ರಬಲ ವಾದ ಮಂಡಿಸಿದ್ದಾರೆ. ಇಂದು ಸರ್ಕಾರೀ ಅಭಿಯೋಜಕ ಪ್ರಸನ್ನಕುಮಾರ್ ತಮ್ಮ ವಾದ ಮಂಡಿಸಲಿದ್ದಾರೆ. ದರ್ಶನ್ ಗೆ ಈ ಪ್ರಕರಣದಲ್ಲಿ ಜಾಮೀನು ಯಾಕೆ ನೀಡಬಾರದು ಎಂದು ವಾದ ಮಂಡಿಸುವ ಸಾಧ್ಯತೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂತಾರ ಸಿನಿಮಾಗೆ ಇಂದು ರಾಷ್ಟ್ರಪ್ರಶಸ್ತಿ ಸ್ವೀಕರಿಸಲಿದ್ದಾರೆ ರಿಷಬ್ ಶೆಟ್ಟಿ: ಲೈವ್ ಇಲ್ಲಿದೆ