Publish Date: Fri, 07 Sep 2018 (06:40 IST)
Updated Date: Fri, 07 Sep 2018 (06:45 IST)
ಬೆಂಗಳೂರು : ಯಾವಾಗಲೂ ವಿವಾದಗಳ ಸುಳಿಯಲ್ಲಿ ಸಿಲುಕಿಕೊಂಡಿರುವ ನಟ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಹೌದು, ಬೆಂಗಳೂರಿನ ಜ್ಞಾನಭಾರತಿ ಕ್ಯಾಂಪಸ್ ನ ಉಲ್ಲಾಳ ಮುಖ್ಯ ರಸ್ತೆಯಲ್ಲಿ ಬುಧವಾರ ಹುಚ್ಚ ವೆಂಕಟ್ ಕಂಠ ಪೂರ್ತಿ ಕುಡಿದು ರಂಪಾಟ ಮಾಡುತ್ತಿದ್ದರು. ನಟ ಹುಚ್ಚ ವೆಂಕಟ್ ರಂಪಾಟವನ್ನು ನೋಡಲು ಸ್ಥಳೀಯರು ಕೂಡ ಮುಗಿಬಿಳೋದ್ರ ಜೊತೆಗೆ ಸೆಲ್ಫಿಯನ್ನು ಕೂಡ ಕ್ಕಿಕ್ಕಿಸಿಕೊಂಡಿದ್ದರು.
ಇದು ಅಂದಿಗೆ ಮುಗಿಯದೆ ಗುರುವಾರ ಕೂಡ ಅವರ ಹುಚ್ಚಾಟ ಮುಂದುವರೆದಿದೆ. ಇದರಿಂದ ಸ್ಥಳೀಯರು ಕೂಡ ಬೇಸತ್ತಿದ್ದಾರೆ. ಇದನ್ನು ಗಮನಿಸಿದ ಪೊಲೀಸರು ಗುರುವಾರ ಬೆಳಿಗ್ಗೆ ಹುಚ್ಚ ವೆಂಕಟ್ ಅವರನ್ನು ಬಂಧಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.