Select Your Language

Notifications

webdunia
webdunia
webdunia
webdunia

ವಿದೇಶಕ್ಕೆ ಹೋಗುವ ಆಸೆ ಇರುವವರು ಒಮ್ಮೆ ಈ ದೇವಸ್ಥಾನಕ್ಕೆ ಭೇಟಿ ನೀಡಿ

ವಿದೇಶಕ್ಕೆ ಹೋಗುವ ಆಸೆ ಇರುವವರು ಒಮ್ಮೆ ಈ ದೇವಸ್ಥಾನಕ್ಕೆ ಭೇಟಿ ನೀಡಿ
ಬೆಂಗಳೂರು , ಗುರುವಾರ, 6 ಸೆಪ್ಟಂಬರ್ 2018 (13:33 IST)
ಬೆಂಗಳೂರು : ವಿದೇಶಕ್ಕೆ ಹೋಗಬೇಕು ಎಂಬ ಆಸೆ ಇದ್ದು, ಇನ್ನು ವೀಸಾ ಸಿಗದೆ ಒದ್ದಾಡುತ್ತಿರುವವರು ಒಮ್ಮೆ ಚಿಕ್ಲುರ್ ಬಾಲಾಜಿ ದೇವಸ್ಥಾನಕ್ಕೆ ಭೇಟಿ ನೀಡಿ.


ಹೌದು. ಹೈದರಬಾದಿನ ಓಸ್ಮಾನ್ ಸಾಗರದ ಬಳಿಯಿರುವ ಚಿಕ್ಲುರ್ ಬಾಲಾಜಿ ದೇವಸ್ಥಾನವು ನಿಮ್ಮೆಲ್ಲ ಬೇಡಿಕೆಗಳನ್ನು ಇಡೇರಿಸುವುದು ಅದರಲ್ಲೂ ವಿಶೇಷವಾಗಿ ವಿದೇಶಕ್ಕೆ  ತೆರೆಳಲು ಬೇಕಾಗುವ ವೀಸವನ್ನು ಖಂಡಿತವಾಗಿಯೂ ಸಿಗುವಂತೆ ಮಾಡುತ್ತದೆ ಎಂಬುದು ಭಕ್ತಾದಿಗಳ ನಂಬಿಕೆ.


500 ವರ್ಷದ ಇತಿಹಾಸವಿರುವ ಈ ದೇವಸ್ಥಾನವನ್ನು ಮಾದಣ್ಣ ಮತ್ತು ಅಕ್ಕಣ್ಣರವರು ಕಟ್ಟಿಸಿದ್ದರು ಎಂಬ ಪ್ರತೀತಿ ಇದೆ, ಆದರೆ ವೀಸಾ ದೇವಸ್ಥಾನ ಎಂದು ಪ್ರಚಾರ ಪಡೆದುಕೊಂಡಿರುವುದು ಇತ್ತೀಚಿನ ವರ್ಷಗಳಲ್ಲಿ. ಆಗಲೇ ಲಕ್ಷಕ್ಕೂ ಹೆಚ್ಚು ಜನರು ಇಲ್ಲಿ ಬೇಡಿಕೆ ಇಟ್ಟು ವೀಸ ಪಡೆದುಕೊಂಡಿದ್ದಾರೆ ಎಂದು ದೇವಸ್ಥಾನದ ಸಿಬ್ಬಂದಿ ಹೇಳುತ್ತಾರೆ.


ವೀಸಾ ಬೇಡಲು ಬರುವವರು ದೇವಸ್ಥಾನದ ಪ್ರಾಕಾರದ ಸುತ್ತ 11 ಪ್ರದಕ್ಷಿಣೆ ಹಾಕಬೇಕು, ತಮ್ಮ passport ಜೊತೆಗೆ ತೆಂಗಿನಕಾಯಿಯನ್ನು ದೇವರ ಮುಂದೆ ಇಟ್ಟು ಪ್ರಾರ್ಥಿಸಿಕೊಳ್ಳಬೇಕು. ವೀಸಾ ಪಡೆದರೆ 108 ಪ್ರದಕ್ಷಿಣೆ ಹಾಕುತ್ತೇನೆ ಎಂದು ಹರಕೆ ಹೊರಬೇಕಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮಕ್ಕಳಾಗದೆ ಕೊರಗುತ್ತಿರುವವರು ಒಮ್ಮೆ ಈ ದೇವಸ್ಥಾನಕ್ಕೆ ಭೇಟಿ ನೀಡಿ. ಯಾಕೆ ಗೊತ್ತಾ?