Publish Date: Fri, 17 Jun 2022 (09:40 IST)
Updated Date: Fri, 17 Jun 2022 (09:47 IST)
ಹೈದರಾಬಾದ್: ಗೋ ಸಾಗಣಿಕೆ ಮಾಡಿದವರ ಹತ್ಯೆ ಮತ್ತು ಕಾಶ್ಮೀರಿ ಪಂಡಿತರ ಹತ್ಯೆ ಒಂದೇ ಎಂದು ಹೇಳಿಕೆ ನೀಡಿದ್ದ ನಟಿ ಸಾಯಿ ಪಲ್ಲವಿ ವಿರುದ್ಧ ಈಗ ಹೈದರಾಬಾದ್ ನಲ್ಲಿ ದೂರು ದಾಖಲಾಗಿದೆ.
ಹೈದರಾಬಾದ್ ನ ಭಜರಂಗದಳ ಕಾರ್ಯಕರ್ತರು ಸಾಯಿ ಪಲ್ಲವಿ ವಿರುದ್ಧ ದೂರು ನೀಡಿದ್ದಾರೆ. ಕಾಶ್ಮೀರ ಪಂಡಿತರ ನರಮೇಧ ತಪ್ಪು ಎನ್ನುವುದಾದರೆ ಇತ್ತೀಚೆಗೆ ಗೋ ಸಾಗಣಿಕೆ ಮಾಡುವ ಅನುಮಾನದಲ್ಲಿ ಓರ್ವನನ್ನು ಕೊಂದು ಜೈ ಶ್ರೀರಾಮ್ ಎಂದು ಹೇಳಿಕೆ ನೀಡಿದ್ದೂ ತಪ್ಪು ಎಂದಿದ್ದರು.
ಅವರ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದೆ. ಬಲಪಂಥೀಯರು ಅವರ ವಿರುದ್ಧ ಕಿಡಿ ಕಾರಿದರೆ ಎಡಪಂಥೀಯರು ಅವರಿಗೆ ಬೆಂಬಲ ನೀಡಿದ್ದಾರೆ.