Publish Date: Mon, 08 Jun 2020 (13:45 IST)
Updated Date: Mon, 08 Jun 2020 (13:47 IST)
ಬೆಂಗಳೂರು: ನಿನ್ನೆ ಅಕಾಲಿಕವಾಗಿ ಸಾವನ್ನಪ್ಪಿದ ನಟ ಚಿರಂಜೀವಿ ಸರ್ಜಾ ಅಂತಿಮ ಯಾತ್ರೆ ಆರಂಭವಾಗಿದ್ದು, ತೆರೆದ ವಾಹನದಲ್ಲಿ ಪಾರ್ಥಿವ ಶರೀರವನ್ನು ಫಾರಂ ಹೌಸ್ ನತ್ತ ಕರೆದೊಯ್ಯಲಾಗುತ್ತಿದೆ.
ನೆಲಗುಳಿಯಲ್ಲಿರುವ ಫಾರಂ ಹೌಸ್ ನಲ್ಲಿ ಅಂತ್ಯ ಕ್ರಿಯೆ ನಡೆಯಲಿದೆ. ಇದಕ್ಕೂ ಮೊದಲು ಬಸವನಗುಡಿ ನಿವಾಸದ ಎದುರು ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.
ಗೌಡ ಸಂಪ್ರದಾಯದಂತೆ ಚಿರು ಸರ್ಜಾ ತಂದೆಯವರು ಮಗನ ಅಂತಿಮ ವಿಧಿವಿಧಾನವನ್ನು ನೆರವೇರಿಸಿದರು. ಈ ವೇಳೆ ಸರ್ಜಾ ಕುಟುಂಬ ಭಾವುಕವಾಗಿತ್ತು.