Select Your Language

Notifications

webdunia
webdunia
webdunia
webdunia

ಮಾದಪ್ಪನ ಹಾಡಿಗೆ ಅವಮಾನ: ಕ್ಷಮೆ ಕೇಳಿದ ಗಾಯಕ ಚಂದನ್ ಶೆಟ್ಟಿ

ಮಾದಪ್ಪನ ಹಾಡಿಗೆ ಅವಮಾನ: ಕ್ಷಮೆ ಕೇಳಿದ ಗಾಯಕ ಚಂದನ್ ಶೆಟ್ಟಿ
ಬೆಂಗಳೂರು , ಮಂಗಳವಾರ, 25 ಆಗಸ್ಟ್ 2020 (13:11 IST)
ಬೆಂಗಳೂರು: ‘ಕೋಲು ಮಂಡೆ ಜಂಗಮದೇವ’ ಮಾದಪ್ಪ ಹಾಡನ್ನು ರ್ಯಾಪರ್ ಶೈಲಿಯಲ್ಲಿ ಹಾಡಿ ಅಶ್ಲೀಲವಾಗಿ ಚಿತ್ರೀಕರಿಸಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿದಂತೆ ರ್ಯಾಪರ್ ಚಂದನ್ ಶೆಟ್ಟಿ ಕ್ಷಮೆ ಯಾಚಿಸಿದ್ದಾರೆ.


ಚಂದನ್ ಶೆಟ್ಟಿ ವಿರುದ್ಧ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಈ ರೀತಿ ಮಾದಪ್ಪನ ಹಾಡಿನಲ್ಲಿ ಡ್ರಗ್ಸ್, ಅಶ್ಲೀಲ ದೃಶ್ಯಗಳನ್ನು ತಂದು ಅವಮಾನ ಮಾಡಿರುವುದಕ್ಕೆ ಚಂದನ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾದ ಹಿನ್ನಲೆಯಲ್ಲಿ ಕ್ಷಮೆ ಯಾಚಿಸಿದ್ದಾರೆ. ಯಾರನ್ನೂ ಅವಮಾನಿಸುವ ಉದ್ದೇಶದಿಂದ ಈ ರೀತಿ ಮಾಡಿರಲಿಲ್ಲ ಎಂದಿದ್ದಾರೆ.

ಇನ್ನು, ಚಂದನ್ ಹಾಡಿನ ಬಗ್ಗೆ ಸಾರ್ವಜನಿಕರು ಮಾತ್ರವಲ್ಲದೆ, ಹಿರಿಯ ಸಾಹಿತಿಗಳು, ತಜ್ಞರೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಮಾದಪ್ಪನ ಭಕ್ತರಿಗೆ, ಹಾಡಿಗೆ ಮಾಡಿದ ಅಪಚಾರ ಎಂದು ಆರೋಪಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತಮ್ಮ ಮೆಚ್ಚಿನ ಹುಡುಗನ ಬರ್ತ್ ಡೇಗೆ ಕೇಕ್ ಕಳುಹಿಸಿಕೊಟ್ರು ಕಿಚ್ಚ ಸುದೀಪ್