ಬೆಂಗಳೂರು: ನೀನಾಸಂ ಸತೀಶ್ ಅಭಿನಯದ ಬ್ರಹ್ಮಚಾರಿ ಮತ್ತು ಪ್ರವೀಣ್, ರಾಧಿಕಾ ನಾರಾಯಣ ಮುಂತಾದವರು ಅಭಿನಯಿಸಿರುವ ಮುಂದಿನ ನಿಲ್ದಾಣ ಸಿನಿಮಾ ಇಂದು ತೆರೆಗೆ ಬರಲಿದೆ.
									
										
								
																	
ಬ್ರಹ್ಮಚಾರಿ ಸಿನಿಮಾ ಹಾಸ್ಯಮಯ ಫ್ಯಾಮಿಲಿ ಎಂಟರ್ ಟೈನ್ ಮೆಂಟ್ ಸಿನಿಮಾವಾಗಿರಲಿದ್ದು, ಸತೀಶ್ ಗೆ ನಾಯಕಿಯಾಗಿ ಅದಿತಿ ಪ್ರಭುದೇವ ಅಭಿನಯಿಸಿದ್ದಾರೆ. ಇವರ ಜತೆಗೆ ದತ್ತಣ್ಣನಂತಹ ಹಿರಿಯ ಕಲಾವಿದರೂ ಇದ್ದಾರೆ.
									
			
			 
 			
 
 			
			                     
							
							
			        							
								
																	ಮುಂದಿನ ನಿಲ್ದಾಣ ಎನ್ನುವ ಸಿನಿಮಾ ಹೊಸಬರದ್ದೇ ಆದರೂ ಇದರ ಹಾಡುಗಳು ಸಂಗೀತ ದಿಗ್ಗಜ ಎಆರ್ ರೆಹಮಾನ್ ತನಕ ತಲುಪಿ, ಮೆಚ್ಚುಗೆಗೆ ಪಾತ್ರವಾಗಿದೆ. ಕತೆಯೇ ಇಲ್ಲಿ ಮುಖ್ಯ ಬಂಡವಾಳ. ಇದೂ ಇಂದು ತೆರೆಗೆ ಬರಲಿದೆ. ಒಂಥರಾ ಯೂಥ್ ಫುಲ್ ಕತೆ ಇದರಲ್ಲಿದೆ. ನೋಡಿ ಎಂಜಾಯ್ ಮಾಡಬಹುದು.