Select Your Language

Notifications

webdunia
webdunia
webdunia
webdunia

ಅವನೇ ಶ್ರೀಮನ್ನಾರಾಯಣ ಟ್ರೈಲರ್ ಲಾಂಚ್ ನಲ್ಲಿ ಕಣ್ಣೀರು ಹಾಕಿದ ರಕ್ಷಿತ್ ಶೆಟ್ಟಿ

ಅವನೇ ಶ್ರೀಮನ್ನಾರಾಯಣ ಟ್ರೈಲರ್ ಲಾಂಚ್ ನಲ್ಲಿ ಕಣ್ಣೀರು ಹಾಕಿದ ರಕ್ಷಿತ್ ಶೆಟ್ಟಿ
ಬೆಂಗಳೂರು , ಶುಕ್ರವಾರ, 29 ನವೆಂಬರ್ 2019 (09:02 IST)
ಬೆಂಗಳೂರು: ಅವನೇ ಶ್ರೀಮನ್ನಾರಾಯಣ ಸಿನಿಮಾ ಟ್ರೈಲರ್ ಲಾಂಚ್ ಆಗಿದ್ದು ಬಿಡುಗಡೆಯಾದ ಮೂವತ್ತೇ ನಿಮಿಷಕ್ಕೆ 50 ಸಾವಿರಕ್ಕಿಂತಲೂ ಹೆಚ್ಚು ವೀಕ್ಷಣೆ ಪಡೆದಿದೆ. ಆದರೆ ಈ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ರಕ್ಷಿತ್ ಕೊಂಚ ಭಾವುಕರಾದ ಘಟನೆಯೂ ನಡೆಯಿತು.


ರಕ್ಷಿತ್ ನಟಿಸಿರುವ ಸಿನಿಮಾ ಮೂರು ವರ್ಷಗಳ ನಂತರ ಇದೀಗ ತೆರೆಗೆ ಬರುತ್ತಿದೆ. ಬೆರಳೆಣಿಕೆಯ ಸಿನಿಮಾ ಮಾಡಿದ್ದರೂ ರಕ್ಷಿತ್ ಗೆ ಅವರದ್ದೇ ಆದ ಅಭಿಮಾನಿ ಬಳಗದವರಿದ್ದಾರೆ. ಅವರ ಪ್ರತಿಯೊಂದು ಸಿನಿಮಾವೂ ಸೂಪರ್ ಹಿಟ್. ಹೀಗಾಗಿ ರಕ್ಷಿತ್ ತಮ್ಮ ಆರಂಭದ ದಿನಗಳನ್ನು ನೆನಪಿಸಿಕೊಂಡು ಅಲ್ಲಿಂದ ಇಲ್ಲಿಯವರೆಗೆ ತಮ್ಮ ಜತೆಗಿದ್ದ ಸ್ನೇಹಿತರನ್ನೆಲ್ಲಾ ನೆನೆಯುತ್ತಾ ಭಾವುಕರಾಗಿ ಕಣ್ಣೀರು ಹಾಕಿದರು. ಅದೇನೇ ಇರಲಿ, ಈ ಸಿನಿಮಾ ಅವರ ಕನಸಿನ ಕೂಸು.

ಈ ಸಿನಿಮಾ ಟ್ರೈಲರ್ ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು, ಮಲಯಾಳಂನಲ್ಲೂ ಲಾಂಚ್ ಆಗಿದ್ದು, ಭಾರೀ ಲೈಕ್ಸ್ ಪಡೆದಿದೆ. ಇನ್ನು, ಸಿನಿಮಾ ಟ್ರೈಲರ್ ನೋಡಿದಾಗ ರಕ್ಷಿತ್ ಶೆಟ್ಟಿ ಪೊಲೀಸ್ ಲುಕ್, ಡೈಲಾಗ್, ಸಾಹಸಗಳು, ಹಳೆಯ ಕಾಲದ ಸೆಟ್ ಎಲ್ಲವೂ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಮೈಲಿಗಲ್ಲಾಗುವುದರಲ್ಲಿ ಸಂಶಯವಿಲ್ಲ ಎನ್ನುವಂತಿದೆ.

ಟ್ರೈಲರ್ ನೋಡಿ ಅಭಿಪ್ರಾಯ ವ್ಯಕ್ತಪಡಿಸಿರುವ ವೀಕ್ಷಕರು ಇದು ಹಾಲಿವುಡ್ ರೇಂಜ್ ಗಿದೆ ಎಂದಿದ್ದಾರೆ. ಅಂತೂ ಮೂರು ವರ್ಷ ಕಾದಿದ್ದಕ್ಕೂ ಭರ್ಜರಿ ಸಿನಿಮಾದೊಂದಿಗೆ ರಕ್ಷಿತ್ ತೆರೆ ಮೇಲೆ ಪಂಚ ಭಾಷೆಗಳಲ್ಲಿ ಮಿಂಚಲು ಬರುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೈಕಲ್ ಏರಿ ಶೂಟಿಂಗ್ ಗೆ ತೆರಳಿದ ಕಿಚ್ಚ ಸುದೀಪ್