Select Your Language

Notifications

webdunia
webdunia
webdunia
webdunia

BigBoss Season 11: ಎರಡೂ ಮನೆಯಲ್ಲಿ ಅದೇ ಒಂದೇ ಮಾತು

BigBoss Season 11, Colors Kannada, Kiccha Sudeep,

Sampriya

ಬೆಂಗಳೂರು , ಬುಧವಾರ, 9 ಅಕ್ಟೋಬರ್ 2024 (16:34 IST)
ಬೆಂಗಳೂರು: ಕನ್ನಡ ಬಿಗ್​ ಬಾಸ್​ ಸೀಸನ್​ 11 ಆರಂಭದಿಂದಲೂ ನರಕ ನಿವಾಸಿ ಹಾಗೂ ಸ್ವರ್ಗ ನಿವಾಸಿಗಳ ಮಧ್ಯೆ ಜಟಾಪಟಿ ಜೋರಾಗಿಯೇ ನಡೆಯುತ್ತಿದೆ.

ಇನ್ನೂ ಸ್ವರ್ಗ ನಿವಾಸಿಯಾಗಿದ್ದ ಜಗದೀಶ್ ನರಕ ನಿವಾಸಿಗಳ ಮನೆಗೆ ಸೇರಿದ ಮೇಲೆ ಕ್ಯಾಪ್ಟನ್ ಹಂಸ ಅವರನ್ನು ಟಾರ್ಗೇಟ್ ಮಾಡಿ ಮಾತನಾಡಯತ್ತಿದ್ದಾರೆ. ಇನ್ನೂ ಹಂಸಾ ಅವರಲ್ಲಿ ನಾಯಕತ್ವ ವಹಿಸಕ್ಕೆ ಆಗದಿದ್ದರೆ ರಾಜೀನಾಮೆ ನೀಡಿ ಎಂದು ನಿನ್ನೆ ಜಗದೀಶ್ ಅವರು ಹಂಸಗೆ ಹೇಳಿದ್ದರು.

ಇದೀಗ ಟಾಸ್ಕ್‌ ವಿಚಾರವಾಗಿ ಸ್ವರ್ಗ ಹಾಗೂ ನರಕ ನಿವಾಸಿಗಳ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಇನ್ನೂ ಎರಡು ತಂಡಗಳಲ್ಲೂ ಈ ಯಡವಟ್ಟಿಗೆ ಉಸ್ತುವಾರಿ ಸರಿಯಿಲ್ಲ ಎಂಬ ಮಾತು ಕೇಳಿಬಂದಿದೆ.  

ಮನೆಯಲ್ಲಿ ಗೊಬ್ಬರ ಟಾಸ್ಕ್ ವೇಳೆ ಹಂಸ ಅವರು ಸರಿಯಾಗಿ ಉಸ್ತುವಾರಿಯನ್ನು ವಹಿಸಿಕೊಂಡಿಲ್ಲ ಎಂದು ಮಾತನಾಡುತ್ತಿದ್ದಾರೆ. ಇನ್ನೂ ಈ ಟಾಸ್ಕ್‌ನಲ್ಲಿ ಸ್ವರ್ಗ ನಿವಾಸಿಗಳು ಗೆದ್ದಿದ್ದಾರೆ. ಇದರಲ್ಲಿ ಉಸ್ತುವಾರಿ ವಹಿಸಿಕೊಂಡ ಹಂಸ ಅವರು ರೂಲ್ಸ್‌ ಫಾಲೋ ಮಾಡಿಲ್ಲ. ಮೋಸದಾಟವಾಗಿದೆ ಎಂದು ನರಕ ನಿವಾಸಿಗಳು ಆರೋಪ ಮಾಡಿದ್ದಾರೆ.

ಜಗದೀಶ್, ಚೈತ್ರಾ ಅವರು ಹಂಸಾ ವಿರುದ್ಧ ಮಾತಿನ ಚಕಮಕಿ ನಡೆದಿದೆ. ಒಟ್ಟಾರೆ ಇಂದಿನ ಶೋ ಟಾಸ್ಕ್‌ಗಿಂತಲೂ, ಮಾತಿನ ಚಕಮಕಿ ಜೋರಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗಂಡ ದರ್ಶನ್ ರಕ್ಷಣೆಗೆ ನಟ ಧನ್ವೀರ್ ಜೊತೆ ವಿಜಯಲಕ್ಷ್ಮಿ ಹೋಗಿದ್ದೆಲ್ಲಿಗೆ: ಇಲ್ಲಿದೆ ವಿಡಿಯೋ