Select Your Language

Notifications

webdunia
webdunia
webdunia
webdunia

ನಟ ಸುದೀಪ್ ಮುಂದೆ ಲಾಯರ್ ಜಗದೀಶ್ ಮರ್ಯಾದೆ ತೆಗೆದ ಧನರಾಜ್

BigBoss Season 11, Super Sunday With Sudeep, Youtuber Dhanraj,

Sampriya

ಬೆಂಗಳೂರು , ಭಾನುವಾರ, 6 ಅಕ್ಟೋಬರ್ 2024 (16:20 IST)
Photo Courtesy X
ವಾರದ ಕತೆ ಕಿಚ್ಚನ ಜತೆ ಶೋನಲ್ಲಿ ವಾರಪೂರ್ತಿ ಕಿರಿಕ್ ಮಾಡಿದ ಲಾಯರ್ ಜಗದೀಶ್‌ಗೆ ನಟ ಕಿಚ್ಚ ಸುದೀಪ್ ಸಖತ್‌ ಆಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಅದಲ್ಲದೆ ಈ ಸಂದರ್ಭದಲ್ಲಿ ಜಗದೀಶ್ ವಿರುದ್ಧ ಸಹಸ್ಪರ್ಧಿಗಳು ಅಸಮಾಧಾನ ಹೊರಹಾಕಿದ್ದಾರೆ. ನಿನ್ನೆಯ ಪಂಚಾಯಿತಿಯಲ್ಲಿ ಸುದೀಪ್ ಅವರು ಜಗದೀಶ್‌ ಅವರಿಗೆ ಖಡಕ್ ಸಂದೇಶ ನೀಡಿದ್ದಾರೆ.

ಇಂದು ಕಲರ್ಸ್‌ ಕನ್ನಡ ವಾಹಿನಿ ಬಿಡುಗಡೆ ಮಾಡಿದ ಸೂಪರ್ ಸಂಡೇ ವಿತ್ ಸುದೀಪ ಶೋನಲ್ಲಿ ಧನರಾಜ್ ಕಾಮಿಡಿಗೆ ಕಿಚ್ಚ ಹಾಗೂ ಮನೆ ಮಂದಿಯೆಲ್ಲ ನಕ್ಕು ನಕ್ಕು ಸುಸ್ತಾಗಿದ್ದಾರೆ.

ದೊಡ್ಮನೆ ಮೃಗಲಾಯವಾದ್ರೆ ಯಾವ ಸ್ಪರ್ಧಿಗಳು ಯಾವ ಪ್ರಾಣಿಯಾಗುತ್ತಾರೆ ಎಂದು ಸುದೀಪ ಅವರು ಧನರಾಜ್ ಬಳಿ ಕೇಳಿದ್ದಾರೆ.

ಅದಕ್ಕೆ ಪ್ರತಿಕ್ರಿಯಿಸಿದ ಧನರಾಜ್‌,  ಐಶ್ವರ್ಯ ಆನೆ, ನಾನು ಜಿಂಕೆಯಾಗಿರುವುದರಿಂದ ಭವ್ಯ ಅವರು ಕೂಡಾ ಜಿಂಕೆ, ಇದು ಅಣ್ಣ ತಂಗಿ ಜಿಂಕೆ, ಬೇರೆ ಅರ್ಥ ಕಲ್ಪಿಸಿಕೊಳ್ಳಬೇಡಿ, ಮನೆಯಲ್ಲಿ ಹೆಂಡ್ತಿ ಬೈತಾಳೆ, ಜಗದೀಶ್ ಅವರು ಊಸರವಳ್ಳಿ , ಯಾಕೆಂದರೆ ಒಂದು ಸಲ ಹೇಳ್ತಾರೆ ಚಾನೆಲ್‌ ಅನ್ನು ಖರೀದಿಸ್ತೀನಿ ಅಂತಾ,  ಮತ್ತೊಂದು ಸಲ ಹೇಳ್ತಾರೆ  ನಾನು ವಿಶ್ವವನ್ನೇ ಖರೀದಿಸ್ತೀನಿ ಅಂತಾ.  ಸರ್ ಅದೇನೂ ಅಂಗಡಿಯಲ್ಲಿ ಸಿಗುವ ಕಾಚಾ ನಾ ಎಂದು ಕಾಮಿಡಿ ಮಾಡಿದ್ದಾರೆ.

ಧನರಾಜ್ ಮಾತಿಗೆ ಎಲ್ಲರೂ ನಕ್ಕಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಡಿವೋರ್ಸ್ ಬೆನ್ನಲ್ಲೇ ಮತ್ತೇ ಹಸೆಮಣೆ ಏರಿದ್ರಾ ಜಯಂ ರವಿ, ಪೋಟೋ ಹಿಂದಿನ ಅಸಲಿಯತ್ತೇನು