Select Your Language

Notifications

webdunia
webdunia
webdunia
webdunia

ರೇಣುಕಾಸ್ವಾಮಿಯಂತಹ ಗಂಡ ಇದ್ದೂ ಏನು ಪ್ರಯೋಜನ ಎಂದ ಬಿಗ್ ಬಾಸ್ ತನಿಷಾ ಕುಪ್ಪಂಡ

Tanisha Kuppand

Sampriya

ಬೆಂಗಳೂರು , ಗುರುವಾರ, 4 ಜುಲೈ 2024 (17:13 IST)
Photo Courtesy X
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ ಬಗ್ಗೆ ಬಿಗ್‌ಬಾಸ್ ಸ್ಪರ್ಧಿ, ಬೆಂಕಿ ಎಂದೇ ಕರೆಸಿಕೊಳ್ಳಯವ ತನಿಷಾ ಕುಪ್ಪಂಡ ಮೊದಲ ಬಾರಿ ಪ್ರತಿಕ್ರಿಯಿಸಿದ್ದಾರೆ.

ಈ ಪ್ರಕರಣದಲ್ಲಿ ದರ್ಶನ್ ಅವರು ಜೈಲು ಸೇರಿದ್ದಾರೆ ಎಂದು ಎನಿಸಿಕೊಂಡಾಗ ನೋವಾಗುತ್ತದೆ. ನನಗೆ ಸಾಕಷ್ಟು ವಿಚಾರಗಳಿಗೆ ದರ್ಶನ್ ಅವರು ಸ್ಫೂರ್ತಿಯಾಗಿದ್ದಾರೆ. ಸುತ್ತಮುತ್ತ ಸಾವಿರಾರು ಕೆಟ್ಟ ಘಟನೆಗಳು ನಡೆಯುತ್ತಿದ್ದಾಗ ಅದರಲ್ಲಿ ಒಳ್ಳೆಯದನ್ನು ನಾವು ಆಯ್ದುಕೊಳ್ಳಬೇಕು. ಹಾಗೇ ದರ್ಶನ್ ವಿಚಾರದಲ್ಲಿ ನಾನು ಅದನ್ನೇ ಮಾಡುತ್ತೇನೆ ಎಂದರು.

ರೇಣುಕಾಸ್ವಾಮಿ ಪ್ರಕರಣ ಸಂಬಂಧ ಅವರ ಪತ್ನಿ ನನಗೆ ಪ್ರಶ್ನೆ ಮಾಡಿದ್ದರು. ಹುಟ್ಟುವ ಮಗುವಿಗೆ ಅಪ್ಪನ ಬಗ್ಗೆ ಏನ್ ಹೇಳಬೇಕು ಅಂತ. ಈ ರೀತಿಯ ಕೆಟ್ಟ ಗುಣವನ್ನು ಹೊಂದಿರುವ ವ್ಯಕ್ತಿಯ ಮುಖವನ್ನು ಆ ಮಗು ನೋಡೋದೇ ಬೇಡ ಎಂದು ಕಟುವಾಗಿ ಪ್ರತಿಕ್ರಿಯಿಸಿದರು.

ಕಾನೂನಿನ ಪ್ರಕಾರ ಎಲ್ಲವೂ ನಡೆಯುತ್ತಿದ್ದು, ಎಲ್ಲರಿಗೂ ನ್ಯಾಯ ಸಿಗಲಿ ಎಂದು ಆಶಿಸಿದರು.

ರೇಣುಕಾಸ್ವಾಮಿಯಂತಹ ಕ್ರೂರರು ನಮಗೂ ಅಶ್ಲೀಲವಾಗಿ ಮೆಸೇಜ್ ಕಳುಹಿಸುತ್ತಾರೆ. ಈ ಬಗ್ಗೆ ದೂರು ನೀಡಿದರೂ ನಮಗೆ ನ್ಯಾಯ ಸಿಗಲಿಲ್ಲ. ಈ ಬಗ್ಗೆ ನಾವು ಹೇಳಿಕೊಂಡರೆ ನಮ್ಮದೇ ತಪ್ಪು ಎಂಬಂತೆ ಕಮೆಂಟ್ ಮಾಡುತ್ತಾರೆ. ನಾವು ಹಾಕುವ ಬಟ್ಟೆಯಿಂದ ಈ ರೀತಿ ಮೆಸೇಜ್ ಹಾಕುತ್ತಾರೆಂದು ನಮ್ಮನ್ನೇ ಕಾರಣಕರ್ತರಾಗಿ ಮಾಡುತ್ತಾರೆ.

ಆದರೆ ನನಗೆ ಈ ರೀತಿಯ ಅಶ್ಲೀಲ ಮೆಸೇಜ್‌ಗಳು ಬಿಗ್‌ಬಾಸ್‌ಗೆ ಹೋಗುವುದಕ್ಕೂ ಮುನ್ನಾ ಹೆಚ್ಚಾಗಿ ಬರುತ್ತಿತ್ತು. ಆದರೆ ಇದೀಗ ಆ ರೀತಿಯ ಮೆಸೇಜ್‌ಗಳು ತುಂಬಾ ಕಡಿಮೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ರೇಣುಕಾಸ್ವಾಮಿ ಹತ್ಯೆ ಪ್ರಕರಣ ಬೇಧಿಸಲು ಪೊಲೀಸರ ಮಾಸ್ಟರ್ ಪ್ಲ್ಯಾನ್