Select Your Language

Notifications

webdunia
webdunia
webdunia
webdunia

‘ಭರತ ಬಾಹುಬಲಿ’ ಸಿನೆಮಾ ನೋಡಿದ್ರೆ ಸಿಗತ್ತೆ ಕೋಟಿ ರೂಪಾಯಿ..!

‘ಭರತ ಬಾಹುಬಲಿ’ ಸಿನೆಮಾ ನೋಡಿದ್ರೆ ಸಿಗತ್ತೆ ಕೋಟಿ ರೂಪಾಯಿ..!
ಬೆಂಗಳೂರು , ಸೋಮವಾರ, 6 ಜನವರಿ 2020 (17:46 IST)
ಪೋಸ್ಟರ್,ಹಾಡುಗಳು,ಟ್ರೈಲರ್ ನಿಂದಲೇ ಕ್ಯೂರಿಯಾಸಿಟಿ ಹುಟ್ಟಿಸಿದ ಸಿನೆಮಾಗಳಲ್ಲಿ, ಮಾಸ್ಟರ್ ಪೀಸ್ ನಿರ್ದೇಶಕ ಮಂಜುಮಾಂಡವ್ಯ ಅವರ ‘ಭರತ ಬಾಹುಬಲಿ’ ಚಿತ್ರ ನಿರೀಕ್ಷೆಯನ್ನ ಹುಟ್ಟುಹಾಕಿದೆ. 
ಇದೇ ಜನವರಿ 17ರಂದು ರಾಜ್ಯದಾದ್ಯಂತ ತೆರೆಕಾಣೋಕೆ ರೆಡಿಯಾಗಿರೋ ಚಿತ್ರಕ್ಕೆ ನಿರ್ಮಾಪಕ “ಟಿ ಶಿವಪ್ರಕಾಶ್” ಹೊಸ ಪ್ರಮೋಶನ್ ಸ್ಟ್ಯಾಟರ್ಜಿ ಯನ್ನ ಮಾಡಿದ್ದಾರೆ.  ಮಂಜುಮಾಂಡವ್ಯ ಅವರ ಕಥೆ,ನಿರ್ದೇಶನ ಸಾಹಿತ್ಯ ಹಾಗೂ ನಾಯಕನಾಗಿ ನಟಿಸ್ತಿರೋ ಈ ಚಿತ್ರ ಅದ್ದೂರಿಯಾಗಿ ಮೂಡಿಬರುವಂತೆ ಮಾಡಿದ್ದಾರೆ. 
 
ಈಗ ಸಿನಿಮಾ ಬಿಡುಗಡೆಯ ಹೊಸ್ತಿಲಲ್ಲಿ ಇರುವಾಗ,ಇದೇ ದಿನಾಂಕದ ಆಸುಪಾಸಿನಲ್ಲಿ ಪರಭಾಷ ಸಿನೆಮಾಗಳು ಸಹ ರಿಲೀಸ್ ಆಗ್ತಿದ್ದು,ಅವುಗಳಿಂದ ಕನ್ನಡ ಚಿತ್ರಗಳಿಗೆ ಮೋಸ ಆಗಬಾರದೆಂದು ಕನ್ನಡ ಸಿನಿಪ್ರಿಯರ ಗಮನ ‘ಭರತ ಬಾಹುಬಲಿ’ ಸೆಳೆಯಲು ಮಹತ್ತರ ತೀರ್ಮಾನವೊಂದಕ್ಕೆ ಬಂದಿದ್ದಾರೆ. 
webdunia
ಹೌದು “ಶ್ರೀ ಭರತ ಬಾಹುಬಲಿ” ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡಿದವರಿಗೆ ಒಂದು ಕೋಟಿ ರೂಪಾಯಿ ಬಹುಮಾನವನ್ನು ಘೋಷಿಸಿದ್ದಾರೆ. 5 ಲಕ್ಷ ಬೆಲೆ ಬಾಳುವ 10 ಕಾರುಗಳು ಹಾಗೂ 5 ಲಕ್ಷ ಬೆಲೆಬಾಳುವ 10 ಚಿನ್ನದ ಆಭರಣಗಳು ಈ ಬಹುಮಾನದಲ್ಲಿ ಸೇರಿದೆ. 20 ಜನ ಅದೃಷ್ಟವಂತ ಪ್ರೇಕ್ಷಕರು ಈ ಬಹುಮಾನವನ್ನು ಪಡೆದುಕೊಳ್ಳಬಹುದಂತೆ.
 
ಈ ಅದೃಷ್ಟ ತಮ್ಮದಾಗಿಸಿಕೊಳ್ಳಬೇಕೆಂದರೆ ಪ್ರೇಕ್ಷಕರು , ಕರ್ನಾಟಕದ ಯಾವುದೇ ಚಿತ್ರಮಂದಿರದಲ್ಲಾದರೂ “ಶ್ರೀ ಭರತ ಬಾಹುಬಲಿ” ವೀಕ್ಷಿಸಿ ಟಿಕೆಟ್ ಜೊತೆಗೆ ನೀಡಲಾಗುವ ಕೂಪನ್ ನಲ್ಲಿ ಹೆಸರು ವಿಳಾಸ ನಮೂದಿಸಿ ನೀಡಬೇಕು.
webdunia
 ಚಿತ್ರ ತಂಡವು “ಲಕ್ಕಿ ಡಿಪ್ ಪಿಕ್ ”ನಲ್ಲಿ 20ಜನ ಅದೃಷ್ಟವಂತ ಪ್ರೇಕ್ಷಕರ ಆಯ್ಕೆ ಪ್ರಕ್ರಿಯೆ ನಡೆದು ಅಲ್ಲಿ ಸೆಲೆಕ್ಟ್ ಆದವರಿಗೆ ಈ ಅದೃಷ್ಟ ಒಲಿದು ಬರಲಿದೆ.ಇನ್ನು ಚಿತ್ರದಲ್ಲಿ ಚಿಕ್ಕಣ್ಣ ಅವರ ಹಾಸ್ಯದ ಕಚಗುಳಿ ಇರಲಿದ್ದು,ಅದ್ದೂರಿಯಾಗಿ ಬಂದಿರೋ ಈ ಕಥೆನ ಮಿಸ್ ಮಾಡ್ಕೋಬಾರ್ದು ಅನ್ನೋದೇ ನಿರ್ಮಾಪಕರ  ಈ ದೊಡ್ಡ ಸಾಹಸಕ್ಕೆ ರೀಜನ್ ಅಂತೆ.ಇನ್ನೂ ಕೋಟಿ ಒಡೆಯ ನೀವಾಗಬೇಕು ಅಂದ್ರೆ ಇದೇ ಜನವರಿ 17 ರಂದು ನೀವು ಭರತ ಬಾಹುಬಲಿಯನ್ನ ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ನೋಡಲೇಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಬೇಸರ ತಂದ ಆ ಸುದ್ದಿ!