Select Your Language

Notifications

webdunia
webdunia
webdunia
webdunia

ಅನುಮತಿ ಇಲ್ಲದೇ ಪುನೀತ್ ಪುತ್ಥಳಿ ನಿರ್ಮಿಸಬಾರದು: ಬಿಬಿಎಂಪಿ

ಅನುಮತಿ ಇಲ್ಲದೇ ಪುನೀತ್ ಪುತ್ಥಳಿ ನಿರ್ಮಿಸಬಾರದು: ಬಿಬಿಎಂಪಿ
ಬೆಂಗಳೂರು , ಭಾನುವಾರ, 7 ನವೆಂಬರ್ 2021 (09:25 IST)
ಬೆಂಗಳೂರು: ಇತ್ತೀಚೆಗೆ ನಿಧನರಾದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮೇಲಿನ ಅಭಿಮಾನಿಗಳಿಂದ ಅಭಿಮಾನಿ ಬಳಗ ಅವರ ಹೆಸರಿನಲ್ಲಿ ಪುತ್ಥಳಿ ನಿರ್ಮಿಸಲು ಮುಂದಾಗುತ್ತಿವೆ. ಆದರೆ ಇದಕ್ಕೆ ಬಿಬಿಎಂಪಿ ಎಚ್ಚರಿಕೆ ಕೊಟ್ಟಿದೆ.

ಕೋರ್ಟ್ ಆದೇಶದ ಪ್ರಕಾರ ನಗರದಲ್ಲಿ ಈಗಾಗಲೇ ಡಾ.ರಾಜ್, ಡಾ.ವಿಷ್ಣುವರ್ಧನ್, ಶಂಕರ್ ನಾಗ್ ಸೇರಿದಂತೆ ಹಲವು ಗಣ್ಯರ ಅನಧಿಕೃತ ಪುತ್ಥಳಿಗಳನ್ನು ಅನಾವರಣಗೊಳಿಸಲು ಬಿಬಿಎಂಪಿ ಮುಂದಾಗಿದೆ. ಇದು ಅಭಿಮಾನಿಗಳಿಗೆ ನೋವು ತರುತ್ತದೆ.

ಹೀಗಾಗಿ ಪುತ್ಥಳಿ ನಿರ್ಮಾಣಕ್ಕೂ ಮೊದಲೇ ಬಿಬಿಎಂಪಿ ಮನವಿ ಮಾಡಿದೆ. ಅನುಮತಿ ಇಲ್ಲದೇ ಪುತ್ಥಳಿ ಮಾಡಿ ಬಳಿಕ ಅದನ್ನು ತೆರುವಗೊಳಿಸುವ ಸಂದರ್ಭ ಎದುರಾದಾಗ ತಾರೆಯರಿಗೆ ಅವಮಾನ ಮಾಡಿದಂತಾಗುತ್ತದೆ. ಹೀಗಾಗಿ ಅನುಮತಿ ಪಡೆದೇ ಪುತ್ಥಳಿ ನಿರ್ಮಾಣ ಮಾಡಿ ಎಂದು ಮನವಿ ಮಾಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಿರುತೆರೆ ವೇದಿಕೆಯಲ್ಲಿ ವಿಕ್ರಾಂತ್ ರೋಣ ರಿಲೀಸ್ ಡೇಟ್ ಬಹಿರಂಗಪಡಿಸಿದ ಕಿಚ್ಚ ಸುದೀಪ್