Select Your Language

Notifications

webdunia
webdunia
webdunia
webdunia

ಸೆಲ್ಫಿಗಾಗಿ ‘ನಾಗಿಣಿ’ಯ ನಾಯಕನ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳು

ಸೆಲ್ಫಿಗಾಗಿ ‘ನಾಗಿಣಿ’ಯ ನಾಯಕನ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳು
ಬೆಂಗಳೂರು , ಶುಕ್ರವಾರ, 8 ಡಿಸೆಂಬರ್ 2017 (09:50 IST)
ಬೆಂಗಳೂರು: ಜನರಿಗೆ ನಟ-ನಟಿಯರ ಜತೆ ಸೆಲ್ಫಿ ತೆಗೆದುಕೊಳ್ಳುವುದೆಂದರೆ ಅದೇನೋ ಕ್ರೇಜ್. ಈ ಸೆಲ್ಫಿ ಹುಚ್ಚಿನಿಂದ ಸಾಕಷ್ಟು ಅವಾಂತರಗಳು ಆಗಿವೆ. ಈಗ ಅಂತದ್ದೇ ಮತ್ತೊಂದು ಘಟನೆ ವಿಜಯನಗರದ ಮಾರುತಿ ಮಂದಿರದ ಬಳಿ ನಡೆದಿದೆ.


ಕಿರುತೆರೆಯ ‘ನಾಗಿಣಿ’ ಧಾರಾವಾಹಿ ನಾಯಕ ದೀಕ್ಷಿತ್ ಮೇಲೆ ಮೂವರು ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಸೆಲ್ಫಿ ನೀಡಲು ನಿರಾಕರಿಸಿದ್ದಕ್ಕೆ ನಾಗಿಣಿ ಧಾರವಾಹಿಯ ನಾಯಕ ದೀಕ್ಷಿತ್  ಅವರ ಕಾರಿನ ಗಾಜನ್ನು ಪುಡಿ ಮಾಡಲಾಗಿದೆ


ದೀಕ್ಷಿತ್ ಜತೆ ಸೆಲ್ಫಿ ತೆಗೆಸಿಕೊಳ್ಳಬೇಕೆಂದು ಪಲ್ಸರ್ ಬೈಕ್ ನಲ್ಲಿ ಹಿಂಬಾಲಿಸಿಕೊಂಡು ಬಂದಿದ್ದರು ಮೂವರು ದುಷ್ಕರ್ಮಿಗಳು. ಕುಡಿದ ಅಮಲಿನಲ್ಲಿ ದೀಕ್ಷಿತ್ ಗೆ ನಿಂದಿಸಿ ಹಲ್ಲೆ ಮಾಡಿದ್ದಾರೆ. ವಿಜಯನಗರ ಪೊಲೀಸ್ ಠಾಣೆಯಲ್ಲಿ ದೀಕ್ಷಿತ್  ದೂರು ದಾಖಲಿಸಿದ್ದಾರೆ. ಪೊಲೀಸರಿಂದ ಆರೋಪಿಗಳಿಗಾಗಿ ಶೋಧ ಕಾರ್ಯ ಆರಂಭವಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಟೀಸರ್ ನಲ್ಲೇ ಕುತೂಹಲ ಸೃಷ್ಟಿಸಿದೆ ‘ಚೂರಿ ಕಟ್ಟೆ’ ಟೀಸರ್ (ವಿಡಿಯೋ)