Webdunia - Bharat's app for daily news and videos

Install App

Exclusive:ಅನಿರುದ್ಧ್ ಇನ್ಮೇಲೆ ವಿಲನ್ ಆಗ್ತಾರಾ? ಜೊತೆಯಲಿ ಧಾರವಾಹಿಯಲ್ಲಿ ಕಾದಿದೆ ಸಸ್ಪೆನ್ಸ್!

Webdunia
ಸೋಮವಾರ, 6 ಡಿಸೆಂಬರ್ 2021 (11:49 IST)
ಕೃಷ್ಣವೇಣಿ ಕೆ.
ಬೆಂಗಳೂರು: ಜೀ ಕನ್ನಡದಲ್ಲಿ ಪ್ರಸಾರವಾಗುವ ಜೊತೆ ಜೊತೆಯಲಿ ಧಾರವಾಹಿ ಮನೆ-ಮನೆಯನ್ನೂ ತಲುಪಿದೆ. ಈ ಧಾರವಾಹಿ ನೋಡುವ ಪ್ರೇಕ್ಷಕರಿಗೆ ಕಾಡುವ ಒಂದೇ ಪ್ರಶ್ನೆಯೆಂದರೆ ಇಷ್ಟು ದಿನ ಹೀರೋ ಆಗಿದ್ದ ಆರ್ಯವರ್ಧನ್ ಇನ್ಮುಂದೆ ವಿಲನ್ ಆಗ್ತಾರಾ? ಈ ಪ್ರಶ್ನೆಗೆ ಸ್ವತಃ ಅನಿರುದ್ಧ ಜತ್ಕಾರ್ ಉತ್ತರಿಸಿದ್ದಾರೆ ನೋಡಿ.


ಒಂದು ಹೊಸ ಪ್ರಯತ್ನ ಮಾಡುತ್ತಿದ್ದೇವೆ. ವಿಭಿನ್ನ ಲೊಕೇಷನ್ ನಲ್ಲಿ ಶೂಟಿಂಗ್ ನಡೀತಿದೆ. ಯಾವ ದೃಶ್ಯ, ಯಾವ ಸ್ಥಳ ಎನ್ನುವುದು ಪ್ರೇಕ್ಷಕರಿಗೆ ಸಸ್ಪೆನ್ಸ್ ಆಗಿಯೇ ಇರಲಿ. ಸದ್ಯದಲ್ಲೇ ಅದು ರಿವೀಲ್ ಆಗಲಿದೆ. ಇದೆಲ್ಲದರ ಕ್ರೆಡಿಟ್ ಪರಿಕಲ್ಪನೆ ಮಾಡುವವರಿಗೆ ಹೋಗಬೇಕು.

ಆ ಡೌಟು ಹಾಗೇ ಇರ್ಲಿ. ಆ ಡೌಟು ನನಗೂ ಇದೆ. ಜೊತೆ ಜೊತೆಯಲಿ ಧಾರವಾಹಿ ಎಂದರೇ ತಿರುವುಗಳಿಗೆ ಫೇಮಸ್. ಆರ್ಯವರ್ಧನ್ ಎನ್ನುವ ಪಾತ್ರಕ್ಕೆ ಸಾಕಷ್ಟು ಆಯಾಮಗಳಿವೆ. ಸದ್ಯಕ್ಕೆ ಇದು ನೆಗೆಟಿವ್ ಪಾತ್ರನಾ? ನೆಗೆಟಿವ್ ಆಗುತ್ತಾ ಎನ್ನುವ ಸಂಶಯ ಹಾಗೆಯೇ ಇದೆ. ಅದುವೇ ಕುತೂಹಲ ಇರೋದು. ನೆಗೆಟಿವ್ ಆಗಲ್ಲ ಅಂತಾನೂ ಈಗಲೇ ಏನೂ ಹೇಳಕ್ಕಾಗಲ್ಲ. ಮುಂದೆ ನೋಡೋಣ.

ನಿಜ ಹೇಳಬೇಕಂದ್ರೆ ನನಗೂ ಗೊತ್ತಿಲ್ಲ. ಈ ಪ್ರವಾಸದಲ್ಲಿ ಇಷ್ಟು ತಿರುವು, ಇಷ್ಟೊಂದು ಪರಿಕಲ್ಪನೆಗೆಳು ಬರುತ್ತವೆ ಎಂದು ಅಂದುಕೊಂಡಿರಲಿಲ್ಲ. ಆದರೆ ಇಲ್ಲಿಯವರೆಗೆ ಬಂದಿದೆ. ಈಗ ಗುರಿ ಏನು ಅಂತ ಕೇಳಿದ್ರೆ ಯಾರಿಗೂ ಗೊತ್ತಿಲ್ಲ. ನಾವು ಗುರಿ ತಲುಪುವವರೆಗಿನ ಪ್ರವಾಸವನ್ನು ಎಂಜಾಯ್ ಮಾಡಬೇಕು ಅಷ್ಟೇ.

 
ಫ್ಯಾನ್ಸ್ ಗೆ ಆ ಕಂಪ್ಲೇಂಟ್ ಇದೆ. ತಿರುವುಗಳು ಇದ್ದರೆನೇ ಮಜಾ. ಮಧ್ಯೆ ಮಧ್ಯೆ ಖುಷಿಯ ಗಳಿಗೆಯೂ ಇದೆ. ಆದ್ರೆ ಒಂದು ಮೃಷ್ಟಾನ್ನ ಭೋಜನ ಎಂದರೆ ಅದರಲ್ಲಿ ಉಪ್ಪಿನಕಾಯಿಯೂ ಇರ್ಲೇಬೇಕು. ಹಾಗೆಯೇ ಇಲ್ಲಿ ಒಳ್ಳೆ ಗಳಿಗೆಗಾಗಿ ಕಾಯಬೇಕು, ಕಾದ ಮೇಲೆ ಸಿಗೋದೇ ಮಜಾ.

ಈಗಲೇ ಏನೂ ಹೇಳಕ್ಕಾಗಲ್ಲ. ಆದ್ರೆ ಆ ಪಾತ್ರವನ್ನು ತುಂಬಾ ಜನ ಮೆಚ್ಚಿಕೊಂಡಿದ್ದರು. ನಾನೂ ತುಂಬಾ ಎಂಜಾಯ್ ಮಾಡಿದ ಪಾತ್ರವದು. ಆರ್ಯವರ್ಧನ್ ಎನ್ನುವ ಪಾತ್ರದ ತದ್ವಿರುದ್ಧ ಪಾತ್ರ. ಈ ಧಾರವಾಹಿ ಆರಂಭದಲ್ಲಿ ಎಷ್ಟೋ ಜನ ನನಗೆ ನೆಗೆಟಿವ್ ಪಾತ್ರ ಮಾಡಬೇಡಿ ಎಂದು ಮೆಸೇಜ್ ಮಾಡ್ತಿದ್ದರು. ಈಗ್ಲೂ ಮಾಡ್ತಾರೆ. ಆದ್ರೆ ಆ ಪಾತ್ರ ನೋಡಿದ ಮೇಲೆ ನೆಗೆಟಿವ್ ಆದ್ರೂ ಪರವಾಗಿಲ್ಲ ಎನ್ನುವವರೂ ಇದ್ದಾರೆ. ಮಸಾಲೆ ಇರ್ಬೇಕಲ್ವಾ? ಮೊನ್ನೆ ಒಂದು ಸನ್ನಿವೇಶದಲ್ಲಿ ನನ್ನ ಒಂದು ನಗುವಿನಿಂದ ಜನರ ತಲೆಯಲ್ಲಿ ಸಂಶಯ ಬಂತು. ಅದರಲ್ಲೇ ಇರೋದು ಮಜಾ. ಎಸ್ ಪಿ ಪಾತ್ರ ನೋಡಿದ ಮೇಲೆ ನೆಗೆಟಿವ್ ಶೇಡ್ ಇರುವ ನನ್ನ ಅಭಿನಯವನ್ನೂ ಜನ ಮೆಚ್ಚಿಕೊಂಡಿದ್ದರು. ನಾನೂ ಬಹಳ ಎಂಜಾಯ್ ಮಾಡಿ ಅಭಿನಯ ಮಾಡಿದ ಪಾತ್ರವದು. ಸದ್ಯಕ್ಕೆ ಈ ಪಯಣವನ್ನು ಎಂಜಾಯ್ ಮಾಡ್ತಿದ್ದೀನಿ.

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments